ADVERTISEMENT

ಸಂತ್ರಸ್ತರ ಸಮಸ್ಯೆ ಆಲಿಸದೆ ತೆರಳಿದ ಸಚಿವೆ ಕರಂದ್ಲಾಜೆ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 7:20 IST
Last Updated 12 ಜುಲೈ 2022, 7:20 IST
ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ
ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ   

ಚಿಕ್ಕಮಗಳೂರು: ಕೊಪ್ಪ ತಾಲ್ಲೂಕಿನ ಗುಡ್ಡೆತೋಟದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರುಸಂತ್ರಸ್ತರ ಸಮಸ್ಯೆ ಆಲಿಸದೆ ತೆರಳಿದರು ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಸಚಿವರಿಗೆ ಸಮಸ್ಯೆ ತೋಡಿಕೊಳ್ಳಲು ಜನರು ಕಾದು ನಿಂತಿದ್ದರು. ಆದರೆ,ಶೋಭಾ ಅವರು ಮಣ್ಣು ಜರುಗಿದ ಸ್ಥಳ ಪರಿಶೀಲಿಸಿ ಹೊರಟರು. ಸಚಿವರ ನಡೆ ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆ ವಿರುದ್ಧ ಘೋಷಣೆ ಕೂಗಿದರು.

'ಸಚಿವೆ ಶೋಭಾ ಅವರು ನೊಂದವರ ಕಷ್ಟ ಆಲಿಸದೆ ತೆರಳಿದ್ದಾರೆ. ಅವರು ಸ್ಥಳಕ್ಕೆ ಬಂದು ಜನರ ಸಮಸ್ಯೆ ಆಲಿಸಬೇಕು ಎಂದು ಪಟ್ಟುಹಿಡಿದು ಪ್ರತಿಭಟನೆಯಲ್ಲಿ ತೊಡಗಿದ್ದೇವೆ' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೀರ್ತಿ ರಾಜ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.