ADVERTISEMENT

ತುಂಗಾ ನದಿಗೆ ಹಾರಿ ಮೂವರು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 19:54 IST
Last Updated 12 ಏಪ್ರಿಲ್ 2019, 19:54 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕೊಪ್ಪ: ತಾಲ್ಲೂಕಿನ ಹರಿಹರಪುರ ಸಮೀಪದ ತುಂಗಾ ನದಿಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಹರಿಹರಪುರ ಸಮೀಪದ ಅಭಿಮಾನ್ ನಗರ ನಿವಾಸಿಗಳಾದ ಉಮೇಶ (37), ಪತ್ನಿ ಶಶಿಕಲಾ (32) ಹಾಗೂ ಶಶಿಕಲಾ ಅವರ ತಾಯಿ ತಾಲ್ಲೂಕಿನ ಅಂದಗಾರು ಸಮೀಪದ ಹುಲುಗಾರಿನವರಾದ ಸುಬ್ಬಮ್ಮ (60) ಮೃತಪಟ್ಟವರು. ಮೃತರು ಒಬ್ಬರಿಗೊಬ್ಬರ ಕೈಗೆ ವೇಲ್‌ನಿಂದ ಕಟ್ಟಿಕೊಂಡಿದ್ದರು.

ಬುಧವಾರದಂದು ಶಶಿಕಲಾ ತವರು ಮನೆಗೆ ಹೋಗಿದ್ದ ದಂಪತಿ, ಗುರುವಾರ ಅಲ್ಲಿಂದ ವಾಪಸಾಗಿದ್ದು, ಮನೆಗೆ ಬಂದಿರಲಿಲ್ಲ. ಈ ಕುರಿತು ಮೃತ ಶಶಿಕಲಾ ಕುಟುಂಬದವರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಐದು ದಿನಗಳ ಹಿಂದೆ ಉಮೇಶ್ ಮತ್ತು ಶಶಿಕಲಾ ಅವರ 2 ವರ್ಷದ ಮಗಳಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಳು.

ಶಾಸಕ ಟಿ.ಡಿ.ರಾಜೇಗೌಡ, ತಹಶೀಲ್ದಾರ್ ಎರ್ರಿಸ್ವಾಮಿ, ಹರಿಹರಪುರ ಪಿಎಸ್‍ಐ ರಘುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.