ADVERTISEMENT

ಸಾಲದ ವಿಚಾರ: ಸ್ನೇಹಿತನ ಹತ್ಯೆ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:36 IST
Last Updated 22 ಮೇ 2022, 2:36 IST

ಚಿತ್ರದುರ್ಗ: ನಗರದ ಕಾಮನಬಾವಿ ಬಡಾವಣೆಯಲ್ಲಿ ಸಾಲದ ವಿಚಾರವಾಗಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಮಹಮ್ಮದ್ ಅಲಿ (30) ಮೃತಪಟ್ಟವರು. ಆರೋಪಿ ಖಾದರ್‌ಬಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಕಾಮನಬಾವಿ ಬಡಾವಣೆಯ ನಿವಾಸಿಗಳಾದ ಈ ಇಬ್ಬರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಖಾದರ್‌ ಬಾಷಾ ಸ್ನೇಹಿತನಾದ ಅಲಿ ಬಳಿ ₹ 1 ಸಾವಿರವನ್ನು ಸಾಲವಾಗಿ ಪಡೆದಿದ್ದ. ಗುರುವಾರ ಸಂಜೆ ಸಾಲದ ಹಣ ಹಿಂತಿರುಗಿಸುವ ವಿಚಾರದಲ್ಲಿ ಖಾದರ್‌ ಬಾಷಾ ಅಲಿ ಜತೆ ಜಗಳವಾಡಿ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದನು. ತೀವ್ರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.