ADVERTISEMENT

ಕಸ ಗುಡಿಸುವಾಗ ಸರ ಎಗರಿಸಿದ ಕಳ್ಳ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 3:02 IST
Last Updated 26 ನವೆಂಬರ್ 2021, 3:02 IST

ಚಿತ್ರದುರ್ಗ: ಇಲ್ಲಿನ ವಿದ್ಯಾನಗರದ 6ನೇ ಕ್ರಾಸ್‌ ನಿವಾಸಿ ಶೋಭಾ ಎಂಬುವರು ನಸುಕಿನ 5.30ರ ಸುಮಾರಿನಲ್ಲಿ ಮನೆಯ ಮುಂದಿನ ಆವರಣವನ್ನು ಶುಚಿಗೊಳಿಸುವಾಗ ದುಷ್ಕರ್ಮಿಗಳು ಸರ ಅಪಹರಿಸಿದ್ದಾರೆ.

ಮನೆಯ ಮುಂಭಾಗ ಕಸ ಗುಡಿಸುವಾಗ ವ್ಯಕ್ತಿಯೊಬ್ಬ ಕಾಲ್ನಡಿಗೆಯಲ್ಲಿ ನಡೆದುಕೊಂಡು ಮಹಿಳೆಯ ಸಮೀಪಕ್ಕೆ ಬಂದಿದ್ದಾನೆ. ಏಕಾಏಕಿ ಕೊರಳಿಗೆ ಕೈಹಾಕಿ ಸರ ಕಿತ್ತು
ಪರಾರಿಯಾಗಿದ್ದಾನೆ. ₹ 1.5 ಲಕ್ಷ ಮೌಲ್ಯದ 35 ಗ್ರಾಮ ಸರ ಅಪಹರಣವಾಗಿದೆ ಎಂದು ಶೋಭಾ ನಗರ ಠಾಣೆಗೆ ನೀಡಿದ ದೂರಿನಲ್ಲಿ
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT