ಚಳ್ಳಕೆರೆ: ಕರ್ನಾಟಕ ಇತಿಹಾಸ ಅಕಾಡೆಮಿಯ 2020ನೇ ಸಾಲಿನ ರಾಜ್ಯ ಮಟ್ಟದ ‘ನಾಯಕ ಶ್ರೀ’ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಹಿರಿಯ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ ಎಂದು ಇತಿಹಾಸ ಅಕಾಡೆಮಿಯ ರಾಜ್ಯ ಅಧ್ಯಕ್ಷ ದೇವರಕೊಂಡ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀರಾಸಾಬಿಹಳ್ಳಿ ಶಿವಣ್ಣ ಅವರು ಮ್ಯಾಸಬೇಡರ ಸಂಸ್ಕೃತಿಯ ಕುರಿತು ‘ದುರುಗ ಜಾನಪದ’, ‘ಮ್ಯಾಸಮಂಡಲ’, ‘ನಾಯಕನಹಟ್ಟಿ ಪಾಳೇಗಾರರು’, ‘ಕಾಡುಗೊಲ್ಲ ಸಮುದಾಯದ ಎತ್ತಪ್ಪ ಮತ್ತು ಜುಂಜಪ್ಪ ಸಾಂಸ್ಕೃತಿಕ ವೀರರ ಕುರಿತ ಮಹಾ ಪ್ರಬಂಧ’, ‘ಜಾನಪದ ಸರಸ್ವತಿ ಸಿರಿಯಜ್ಜಿ’, ‘ಗಣೆಯ ದನಿ’, ‘ಕಡಗೋಲು’, ‘ಗೌರಸಮುದ್ರದ ಮಾರಮ್ಮ’, ‘ಉಳ್ಳಾರ್ತಿ ಗೌರಮ್ಮ’, ‘ಮರೆಯಲಾರದ ನಾಟಕಕಾರ ಮರಡಿಹಳ್ಳಿ ಸೀತಾರಾಮ ರೆಡ್ಡಿ’ ನಾಟಕ ಹೀಗೆ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಒಟ್ಟು 40 ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.
‘ನಾಯಕ ಶ್ರೀ’ ಪ್ರಶಸ್ತಿಯ ಮೊತ್ತ ₹ 10 ಸಾವಿರ. ನವೆಂಬರ್ ಅಥವಾ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.