ADVERTISEMENT

ಚಿತ್ರದುರ್ಗ: ಮೂವರು ಹಂದಿ ಸಾಕಣೆದಾರರ ಕೊಲೆ

ಹಂದಿ ಕಳವಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 8:05 IST
Last Updated 17 ಆಗಸ್ಟ್ 2020, 8:05 IST
ಹಂದಿ ಸಾಕಾಣಿಕೆ–ಸಾಂದರ್ಭಿಕ ಚಿತ್ರ
ಹಂದಿ ಸಾಕಾಣಿಕೆ–ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಹಂದಿ ಕಳವಿಗೆ ಯತ್ನಿಸಿದ ಗುಂಪೊಂದು ಮೂವರನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ.

ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿರುವ ಷೆಡ್‌ನಲ್ಲಿ ಈ ಘಟನೆ ನಡೆದಿದೆ. ಸೀನಪ್ಪ (53), ಯಲ್ಲೇಶಿ (30),ಮಾರೇಶಿ (30) ಕೊಲೆಯಾದವರು.

ಷಡ್‌ ಮೇಲೆ ಏಕಾಏಕಿ ದಾಳಿ ನಡೆಸಿದ ಗುಂಪೊಂದು ಹಂದಿ ಸಾಕಣೆದಾರರ ಕಣ್ಣಿಗೆ ಖಾರದಪುಡಿ ಎರಚಿದೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಯಲ್ಲೇಶಿ ಮತ್ತು ಮಾರಪ್ಪ ಎಂಬುವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಸೀನಪ್ಪ ಎಂಬುವವರ ಮೇಲೆ ತಲೆಯನ್ನು ಕತ್ತರಿಸಿ ಬಿಸಾಡಲಾಗಿದೆ.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.