ADVERTISEMENT

ಚಿತ್ರದುರ್ಗ | ವಿದ್ಯುತ್ ಸ್ಥಗಿತ: ಬೆಸ್ಕಾಂ ಇಇ, ಎಇಇ ಅಮಾನತು

​ಪ್ರಜಾವಾಣಿ ವಾರ್ತೆ
Published 16 ಮೇ 2022, 2:50 IST
Last Updated 16 ಮೇ 2022, 2:50 IST

ಹೊಳಲ್ಕೆರೆ: ತಾಲ್ಲೂಕಿನ ಶಿವಗಂಗಾ ವಿದ್ಯುತ್ ಘಟಕ ವ್ಯಾಪ್ತಿಯಲ್ಲಿ ಮೇ 10ರಂದು ಮಧ್ಯರಾತ್ರಿ 12.55ರಿಂದ ಮೇ 11ರ ರಾತ್ರಿ 7.15ರವರೆಗೆ ವಿದ್ಯುತ್ ಸ್ಥಗಿತವಾದ ಕಾರಣ ಕರ್ತವ್ಯಲೋಪ ಸಂಬಂಧ ಬೆಸ್ಕಾಂ ಇಇ ಹಾಗೂ ಎಇಇ ಅವರನ್ನು ಅಮಾನತು ಮಾಡಲಾಗಿದೆ.

ಹೊಳಲ್ಕೆರೆಯ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ. ನಾಗರಾಜಪ್ಪ ಹಾಗೂ ಚಿತ್ರದುರ್ಗದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಜಯಣ್ಣ ಅವರನ್ನು ಅಮಾನತು ಮಾಡಿಬೆಸ್ಕಾಂ ಪ್ರಧಾನ ವ್ಯವಸ್ಥಾಪಕ ಎಸ್.ಡಿ. ಪ್ರಶಾಂತ ಕುಮಾರ್‌ ಆದೇಶಿಸಿದ್ದಾರೆ.

‘18 ಗಂಟೆ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಸಕಾಲದಲ್ಲಿ ದುರಸ್ತಿ ಮಾಡಲು ವಿಭಾಗಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳು ವಿಫಲರಾಗಿದ್ದಾರೆ. ವಿದ್ಯುತ್ ಅಡಚಣೆಯ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುವಲ್ಲಿ ಬೇಜವಾಬ್ದಾರಿತನ ತೋರಿದ್ದಾರೆ. ಆದ್ದರಿಂದ ಇಬ್ಬರನ್ನೂ ಅಮಾನತು ಮಾಡಲಾಗಿದೆ’ ಎಂದು ಆದೇಶದಲ್ಲಿ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.