ADVERTISEMENT

ಭರಮಸಾಗರದ ಹಲಸೆಂದರೆ ಪುನೀತ್‌ಗೆ ಇಷ್ಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 14:11 IST
Last Updated 4 ನವೆಂಬರ್ 2021, 14:11 IST
ಭರಮಸಾಗರದ ಹಲಸಿನ ಹಣ್ಣು
ಭರಮಸಾಗರದ ಹಲಸಿನ ಹಣ್ಣು   

ಭರಮಸಾಗರ: ಭರಮಸಾಗರದ ಹಲಸಿನ ಹಣ್ಣೆಂದರೆ ಪುನೀತ್‌ ರಾಜ್‌ಕುಮಾರ್‌ಗೆ ಬಲು ಇಷ್ಟ. ಭರಮಸಾಗರದ ಹಲಸಿಗೂ ಡಾ. ರಾಜ್‌ಕುಮಾರ್ ಕುಟುಂಬದವರಿಗೂ ಅವಿನಾಭಾವ ಸಂಬಂಧ.

ಗೋಕಾಕ್ ಚಳವಳಿ ಸಂದರ್ಭದಲ್ಲಿಡಾ.ರಾಜ್‌ಕುಮಾರ್ ಅವರು ದಾವಣಗೆರೆಗೆ ಭರಮಸಾಗರದ ಮೂಲಕ ಹಾದು ಹೋಗುವಾಗ ಇಲ್ಲಿನ ಹಲಸಿನ ಹಣ್ಣಿನ ಸವಿ ಉಂಡಿದ್ದರು. ಆಗಿನಿಂದ ಪ್ರತಿ ವರ್ಷವೂ ಅವರ ಮನೆಗೆ ಭರಮಸಾಗರದ ಹಲಸಿನ ಹಣ್ಣನ್ನು ಇಲ್ಲಿಯ ತೋಟದ ಮಾಲೀಕ ಶೇಖರಪ್ಪ ಅವರು ಕಾರ್ಮಿಕ ಬಸವಂತಪ್ಪ ಎಂಬುವವರ ಮೂಲಕ ಬೆಂಗಳೂರಿನ ಅವರ ಮನೆಗೆ ಕಳುಹಿಸಿಕೊಡುತ್ತಿದ್ದರು. ಡಾ. ರಾಜ್‌ಕುಮಾರ್ ನಿಧನದ ನಂತರವೂ ಭರಮಸಾಗರದಿಂದ ಹಲಸಿನ ಹಣ್ಣನ್ನು ಡಾ.ರಾಜ್ ಕುಟುಂಬಕ್ಕೆ ಕಳುಹಿಸಲಾಗುತ್ತಿತ್ತು. ಆಗ ಪಾರ್ವತಮ್ಮ ನವರು, ಶಿವಣ್ಣ, ರಾಘಣ್ಣ, ಪುನೀತ್ ಹಲಸಿನ ಹಣ್ಣನ್ನು ನೋಡಿ ಓಹೋ ಭರಮಸಾಗರದ ಹಲಸು ಎಂದು ಗುರುತಿಸಿ ಇಷ್ಟ ಪಟ್ಟು ಸೇವಿಸುತ್ತಿದ್ದರು.

ಅದರಲ್ಲಿಯೂ ಪುನೀರ್‌ಗೆ ಇಲ್ಲಿಯ ‘ಚಂದ್ರ’ ತಳಿಯ ಹಲಸಿನ ಹಣ್ಣು ಇಷ್ಟವಾಗಿತ್ತು. ಹೀಗಾಗಿ ಪದೇ ಪದೇ ಅವರೇ ದೂರವಾಣಿ ಕರೆ ಮಾಡಿ ಹಣ್ಣನ್ನು ತರಿಸಿಕೊಳ್ಳುತ್ತಿದ್ದರು. ಹಣ್ಣು ತೆಗೆದುಕೊಂಡು ಹೋದ ಕಾರ್ಮಿಕರಿಗೆ ಕೈತುಂಬ ಹಣ ನೀಡಿ ದಾರಿ ವೆಚ್ಚಕ್ಕೂ ನೀಡುತ್ತಿದ್ದ ಕೊಡುಗೈ ದಾನಿಗಳಾಗಿದ್ದರು. ಆದರೆ ಈಗ ಅವರು ಇಲ್ಲದಿರುವುದು ಬಹಳ ದುಃಖ ತಂದಿದೆ. ಭರಮಸಾಗರದ ಹಲಸಿನಹಣ್ಣಿಗೆ ಪ್ರಖ್ಯಾತಿ ಸಿಗಲು ಇದೂ ಒಂದು ಕಾರಣವಾಗಿತ್ತು ಎಂದು ಶೇಖರಪ್ಪ ಕಣ್ಣೀರಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.