ADVERTISEMENT

ಚಳ್ಳಕೆರೆ | ಟಾಟಾ ಏಸ್ ಬೈಕ್ ಮುಖಾಮುಖಿ: ಸ್ಥಳದಲ್ಲೇ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 13:40 IST
Last Updated 25 ಆಗಸ್ಟ್ 2020, 13:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಳ್ಳಕೆರೆ: ತಾಲ್ಲೂಕಿನ ಸಿದ್ದಾಪುರದ ಗೇಟ್ ಬಳಿ ಸೋಮವಾರ ರಾತ್ರಿ ಟಾಟಾ ಏಸ್‌ ಮತ್ತು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಸಿದ್ದಪ್ಪ (35), ದುರ್ಗವರದ ನೀಲಪ್ಪ (36) ಮತ್ತು ಬೊಮ್ಮಸಮುದ್ರ ಗ್ರಾಮದ ಕರಿಯಣ್ಣ(30) ಮೃತಪಟ್ಟವರು.ತೀವ್ರವಾಗಿ ಗಾಯಗೊಂಡ ಅಜಯ್‍ಕುಮಾರ್ ಅವರನ್ನು ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ನಗರದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಈ ಅಪಘಾತವಾಗಿದ್ದು, ಎದುರಿಗೆ ಬಂದ ಬೈಕ್ ಅನ್ನು ತಪ್ಪಿಸಲು ಹೋಗಿ ಟಾಟಾ ಏಸ್ ಪಲ್ಟಿಯಾಗಿದೆ. ಬೈಕ್ ಸವಾರರು ಪರಾರಿಯಾಗಿದ್ದಾರೆ’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಚಳ್ಳಕೆರೆ ಠಾಣೆಯಪಿಎಸ್‍ಐ ಮಂಜುನಾಥ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.