ADVERTISEMENT

ಕವನದ ಹುಟ್ಟು ಸಹಜ; ಪ್ರಜ್ಞಾಪೂರ್ವಕವಲ್ಲ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 9:10 IST
Last Updated 17 ಸೆಪ್ಟೆಂಬರ್ 2011, 9:10 IST

ಮಂಗಳೂರು: `ಕವನದ ಹುಟ್ಟು ಸಹಜವಾಗಿರಬೇಕೇ ಹೊರತು ಅದು ಪ್ರಜ್ಞಾಪೂರ್ವಕವಾಗಿರಬಾರದು. ಕವಿ ಉಳಿಯುವುದು ಎಲ್ಲಾ ಕಾಲಕ್ಕೂ ಸಲ್ಲುವ ಸಲ್ಲುವ ಕವನಗಳನ್ನು ರಚಿಸಿದಾಗ ಮಾತ್ರ~ ಎಂದು ಸಾಹಿತಿ ರೂಪಾ ಹಾಸನ ಹೇಳಿದರು.

ಅವರು ಈಚೆಗೆ ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಡಾ.ಕೆ.ವಿ.ಜಲಜಾಕ್ಷಿ ಸಂಸ್ಮರಣ ಪ್ರತಿಷ್ಠಾನಗಳ ಆಶ್ರಯದಲ್ಲಿ ನಡೆದ ಡಾ.ಕೆ.ವಿ.ಜಲಜಾಕ್ಷಿ ಸಂಸ್ಮರಣೆ ಹಾಗೂ ಕವನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಜಾಕ್ಷಿ ಅವರ ಸಣ್ಣಕತೆಗಳ ಕುರಿತಾಗಿ ಎನ್.ಕೆ.ರಾಜಲಕ್ಷ್ಮಿ ಮಾತನಾಡಿದರು. ಸಂಘ ಅಧ್ಯಕ್ಷೆ ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ವಿ.ಜಿ.ಭಟ್, ಸಾಹಿತಿ ಚಂದ್ರಕಲಾ ನಂದಾವರ, ಸಂಘ  ಕಾರ್ಯದರ್ಶಿ ಯು.ಶೈಲಾ ಮಾತನಾಡಿದರು.

ಕವನ ಸ್ಪರ್ಧೆಯಲ್ಲಿ ಸಂತ ಆ್ಯಗ್ನೆಸ್ ಕಾಲೇಜಿನ ವಿನಯಾ ಭಟ್, ಸುರತ್ಕಲ್ ಗೋವಿಂದದಾಸ ಕಾಲೇಜಿನ ಎಂ.ಪವನ್ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಸುಭಾಷ್ ಪಟ್ಟಾಜೆ ಮೊದಲ ಮೂರು ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.