ADVERTISEMENT

ಸುಬ್ರಹ್ಮಣ್ಯ: ಸಾಧಕರಿಗೆ ಕನ್ನಡ ಸಿರಿ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 6:50 IST
Last Updated 5 ಫೆಬ್ರುವರಿ 2011, 6:50 IST

ಸುಬ್ರಹ್ಮಣ್ಯ:  ಹರಿಹರಪಲ್ಲತ್ತಡ್ಕದಲ್ಲಿ ಇತ್ತೀಚೆಗೆ ನಡೆದ ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮೂರು ಮಂದಿ ಕಿರಿಯ ಸಾಧಕರಿಗೆ ಕನ್ನಡ ಸಿರಿ ಪುರಸ್ಕಾರ ನೀಡಿ ಗೌರವಿಸಲಾಯಿತು.

 ಕಾಮನ್‌ವೆಲ್ತ್ ಮತ್ತು ಏಷ್ಯಾಡ್ ಕೂಟದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಪದಕ ಗಳಿಸಿ ಸುಳ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ  ಅಥ್ಲೇಟಿಕ್ ತಾರೆ ರೆಬೆಕಾ ಜೋಸ್ ಅವರಿಗೆ ಸುಳ್ಯ ತಾಲ್ಲೂಕು ಕಸಾಪ ಅಧ್ಯಕ್ಷೆ ಎಂ. ಮೀನಾಕ್ಷಿ ಗೌಡ ಕನ್ನಡ ಸಿರಿ ಪುರಸ್ಕಾರವನ್ನು ನೀಡಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಳ್ಯಕ್ಕೆ ಕೀರ್ತಿ ತಂದ ರೆಬೆಕಾ ಜೋಸ್ ಕುಟುಂಬ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಸರ್ಕಾರ ಇವರಿಗೆ ನಿವೇಶನ ಅಥವಾ ಮನೆಯನ್ನು ನೀಡಿ ಪ್ರೋತ್ಸಾಹಿಸಬೇಕು ಎಂದರು.

ಗ್ರಾಮೀಣ ಭಾಗದ ಟೆನಿಸ್ ಪ್ರತಿಭೆ ಧನ್ಯಾ ಕಿರಿಭಾಗ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೌಶಿಕ್ ಕೂಜುಗೋಡು ಅವರನ್ನು ಪುರಸ್ಕರಿಸಲಾಯಿತು. ಕೊಲ್ಲಮೊಗ್ರ ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ, ಲಲಿತಾ ಮಲ್ಲಾರ,  ಸತೀಶ್ ಕೂಜುಗೋಡು, ತಾರಾ ಮಲ್ಲಾರ, ಉಷಾ ಪ್ರಭಾಕರ, ದುರ್ಗಾಕುಮಾರ್ ನಾಯರ್‌ಕೆರೆ, ಜಯಪ್ರಕಾಶ್ ಕೂಜುಗೋಡು, ಡಿ.ಎಸ್. ಭಾಗವತರ್, ಜಯರಾಮ ದೇರಪಜ್ಜನ ಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.