ADVERTISEMENT

ಕುಕ್ಕೆಗೆ ನಟಿ ಮಾನ್ವಿತಾ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 4:03 IST
Last Updated 25 ಡಿಸೆಂಬರ್ 2021, 4:03 IST
ಚಿತ್ರ:24ಎಸ್ಯುಬಿ03 ಕುಕ್ಕೆಗೆ ಚಿತ್ರ ನಟಿ ಮನ್ವಿತಾ ಭೇಟಿ ನೀಡಿದರು.
ಚಿತ್ರ:24ಎಸ್ಯುಬಿ03 ಕುಕ್ಕೆಗೆ ಚಿತ್ರ ನಟಿ ಮನ್ವಿತಾ ಭೇಟಿ ನೀಡಿದರು.   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕೇತ್ರಕ್ಕೆ ಟಗರು ಸಿನಿಮಾ ನಾಯಕಿ ನಟಿ ಮಾನ್ವಿತಾ ಅವರು ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.

‘ತುಂಬಾ ಜನರಿಗೆ ನಾನು ಮಂಗಳೂರಿನವಳು ಎಂಬುದು ಗೊತ್ತಿಲ್ಲ, ತುಳು ಭಾಷೆಯಲ್ಲಿ ಒಳ್ಳೆಯ ಚಿತ್ರ ಕಥೆ ಸಿಕ್ಕರೆ ನಟಿಸಲು ಸಿದ್ಧಳಿದ್ದೇನೆ’ ಎಂದು ನಟಿ ಮಾನ್ವಿತಾ ಪತ್ರಕರ್ತರ ಜತೆಗೆ ಮಾತನಾಡಿ ಮಾಹಿತಿ ನೀಡಿದರು.

‘ಪುನೀತ್ ರಾಜ್‌ಕುಮಾರ್ ನಿಧನ ಸಹಿಸುವುದು ಅಸಾಧ್ಯ. ಅವರು ನಮ್ಮೊಂದಿಗೆ ಸದಾ ಇರುತ್ತಾರೆ’ ಎಂದರು.

ADVERTISEMENT

‘ಹೈದರಾಬಾದ್‌ನಲ್ಲಿ ಪ್ರೊಡಕ್ಷನ್ ಹೌಸ್‌ ಪ್ರಾರಂಭಿಸಿದ್ದೇನೆ. ಒಳ್ಳೆಯ ಕನ್ನಡ ಚಿತ್ರಗಳ ನಿರ್ಮಿಸುವ ಗುರಿ ಇದೆ ಅದಕ್ಕಾಗಿ ದೇವರ ಆಶೀರ್ವಾದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ಅಭಿನಯದ ಮರಾಠಿ ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗುವ ಸಾಧ್ಯತೆಯಿದೆ. ಕೋವಿಡ್‌ನಿಂದಾಗಿ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.