ADVERTISEMENT

ಕುಕ್ಕೆ: ತುಲಾಭಾರ, ಅನ್ನಪ್ರಾಶನ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 21:06 IST
Last Updated 15 ನವೆಂಬರ್ 2020, 21:06 IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರದಿಂದ ತುಲಾಭಾರ ಮತ್ತು ಅನ್ನಪ್ರಾಶನ ಸೇವೆಗಳು ಆರಂಭ
ಗೊಂಡಿವೆ. ಇದರಿಂದಾಗಿ ಕ್ಷೇತ್ರದಲ್ಲಿ ಇದೀಗ ಎಲ್ಲ ಸೇವೆಗಳು ಪ್ರಾರಂಭಗೊಂಡಿವೆ.

ದೀಪಾವಳಿ ಪ್ರಯುಕ್ತ ಪಲ್ಲಕ್ಕಿಮತ್ತು ಬಂಡಿ ಉತ್ಸವ ನೆರವೇರಿದವು. ಕ್ಷೇತ್ರದಲ್ಲಿ ಸೋಮವಾರ ದೇವರು ಹೊರಾಂಗಣ ಪ್ರವೇಶಿ
ಸುವ ಮೂಲಕ ಉತ್ಸವಾದಿಗಳು ಆರಂಭಗೊಳ್ಳಲಿವೆ. ಲಕ್ಷ ದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವಗಳೂ ನಡೆಯಲಿವೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT