ADVERTISEMENT

ಮೂವರು ಮಕ್ಕಳ ಬಾವಿಗೆ ತಳ್ಳಿ ಕೊಲೆಗೈದ ತಂದೆ!

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 19:30 IST
Last Updated 23 ಜೂನ್ 2022, 19:30 IST
ಕೊಲೆಗೀಡಾದ ಮಕ್ಕಳು
ಕೊಲೆಗೀಡಾದ ಮಕ್ಕಳು   

ಮೂಲ್ಕಿ (ದಕ್ಷಿಣ ಕನ್ನಡ ಜಿಲ್ಲೆ): ಮೂವರು ಮಕ್ಕಳನ್ನು ಬಾವಿಗೆ ಎಸೆದು ಕೊಂದ ತಂದೆ, ಪತ್ನಿಯನ್ನೂ ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕಾವೇರಿಯ ಪದ್ಮನೂರಿನಲ್ಲಿ ಗುರುವಾರ ಸಂಜೆ ನಡೆದಿದೆ.

ಹಿತೇಶ್ ಶೆಟ್ಟಿಗಾರ್ (38) ಎಂಬಾತ ಈ ಕೃತ್ಯ ಎಸಗಿದ್ದು ರಶ್ಮಿತಾ (13) ಉದಯ (11) ಮತ್ತು ದಕ್ಷಿತ್ (4) ಸಾವಿಗೀಡಾಗಿದ್ದಾರೆ. ಹಿತೇಶ್ ಮತ್ತು ಪತ್ನಿ ಲಕ್ಷ್ಮಿ (28) ಅವರನ್ನು ರಕ್ಷಿಸಲಾಗಿದೆ.

ಗಂಡ ಹೆಂಡತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದ್ದು ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ಬಂದ ಲಕ್ಷ್ಮಿ, ಮಕ್ಕಳು ಕಾಣದಿದ್ದಾಗ ಹುಡುಕಿದ್ದು ಆಗ ಬಾವಿಯಲ್ಲಿ ಮುಳುಗಿ ಏಳುತ್ತಿದ್ದುದು ಕಂಡು ಚೀರಾಡಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಹಿತೇಶ್‌ ಪತ್ನಿಯನ್ನು ಬಾವಿಗೆ ತಳ್ಳಿ ತಾನೂ ಜಿಗಿದಿದ್ದಾನೆ. ಅಗ್ನಿಶಾಮಕ ದಳದವರ ನೆರವಿನೊಂದಿಗೆ ಸ್ಥಳೀಯರು ಬಾವಿಗೆ ಇಳಿದು ಎಲ್ಲರನ್ನು ಮೇಲೆತ್ತಿದ್ದಾರೆ. ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮಕ್ಕಳು ಮೃತಪಟ್ಟಿವೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.