ADVERTISEMENT

ಮಂಗಳೂರು: ಎನ್‌ಐಟಿಕೆಯಲ್ಲಿ ಯೋಗ ಮುದ್ರಾ ತರಬೇತಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:46 IST
Last Updated 25 ಜೂನ್ 2022, 6:46 IST
ಸುರತ್ಕಲ್ ಎನ್‌ಐಟಿಕೆಯಲ್ಲಿ ನಡೆದ ಯೋಗ ಮುದ್ರಾ ತರಬೇತಿ ಶಿಬಿರದಲ್ಲಿ ಎನ್‌ಐಟಿಕೆ ನಿರ್ದೇಶಕ ಉದಯಕುಮಾರ್ ಯರಗಟ್ಟಿ ಮಾತನಾಡಿದರು
ಸುರತ್ಕಲ್ ಎನ್‌ಐಟಿಕೆಯಲ್ಲಿ ನಡೆದ ಯೋಗ ಮುದ್ರಾ ತರಬೇತಿ ಶಿಬಿರದಲ್ಲಿ ಎನ್‌ಐಟಿಕೆ ನಿರ್ದೇಶಕ ಉದಯಕುಮಾರ್ ಯರಗಟ್ಟಿ ಮಾತನಾಡಿದರು   

ಮಂಗಳೂರು: ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿಕೆ) ಸೇವಾದಳವು ಶುಕ್ರವಾರದಿಂದ ಜುಲೈ 3ರವರೆಗೆ ಹತ್ತು ದಿನಗಳ ಯೋಗ ಮುದ್ರಾ ತರಬೇತಿ ಆರಂಭಿಸಿದೆ.

ಇದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಫಿಟ್ ಇಂಡಿಯಾ ಉಪಕ್ರಮದ ಭಾಗವಾಗಿದೆ. ಎನ್‌ಐಟಿಕೆ ನಿರ್ದೇಶಕ ಪ್ರೊ. ಉದಯಕುಮಾರ್ ಯರಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಫಿಟ್ ಇಂಡಿಯಾ ಆಂದೋಲನದ ಭಾಗವಾಗಿ ನಡೆಯುವ ತರಬೇತಿಯನ್ನು ಯೋಗಗುರು ನೀರವ್ ಸಂಕೇತ್ ಸ್ವಾಮೀಜಿ ನಡೆಸಿಕೊಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT