ADVERTISEMENT

ಮಂಗಳೂರು: ‘ಶ್ರಮಮೇವ ಜಯತೆ’ ಕಾರ್ಯಕ್ರಮ ಜ. 29ಕ್ಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 16:17 IST
Last Updated 27 ಜನವರಿ 2023, 16:17 IST
ಸುದ್ದಿಗೋಷ್ಠಿಯಲ್ಲಿ ಅಭಿಷೇಕ್‌ ಶೆಟ್ಟಿ ಮಾತನಾಡಿದರು. ಕಾರ್ತಿಕ್‌ ಶೆಟ್ಟಿ ಹಾಗೂ ಕಿರಣ್‌ ದೊಂಡೊಳೆ ಇದ್ದಾರೆ
ಸುದ್ದಿಗೋಷ್ಠಿಯಲ್ಲಿ ಅಭಿಷೇಕ್‌ ಶೆಟ್ಟಿ ಮಾತನಾಡಿದರು. ಕಾರ್ತಿಕ್‌ ಶೆಟ್ಟಿ ಹಾಗೂ ಕಿರಣ್‌ ದೊಂಡೊಳೆ ಇದ್ದಾರೆ   

ಮಂಗಳೂರು: ‘ಟೀಮ್‌ ಬ್ಲ್ಯಾಕ್‌ ಆ್ಯಂಡ್‌ ವೈಟ್‌’ ಸಂಸ್ಥೆ ‘ಶ್ರಮಮೇವ ಜಯತೆ’ ಕಾರ್ಯಕ್ರಮವನ್ನು ಇಲ್ಲಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಇದೇ 29 (ಭಾನುವಾರ) ಸಂಜೆ 5ಕ್ಕೆ ಆಯೋಜಿಸಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ತಂಡದ ಅಭಿಷೇಕ್‌ ಶೆಟ್ಟಿ, ‘ಸಮಾಜದ ನರನಾಡಿಯಂತಿರುವ ಶ್ರಮಿಕ ವರ್ಗವಿದೆ. ಅವರ ಸೇವೆಯಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ. ಸ್ವಚ್ಛತಾ ಕರ್ಮಿ, ಲೈನ್ ಮ್ಯಾನ್‌, ಅಂಚೆ ಬಡವಾಡೆ ಮಾಡುವವರು, ಸಾರಿಗೆ ಸಿಬ್ಬಂದಿ, ಸಂಚಾರ ಪೊಲೀಸರು, ಆರೋಗ್ಯ, ಕಾರ್ಯಕರ್ತರು, ಸ್ಮಶಾನದ ಕಾರ್ಮಿಕರು... ಮೊದಲಾದ ಶ್ರಮಿಕ ವರ್ಗದವರನ್ನು ಗುರುತಿಸಿ ಅವರ ಸೇವೆಯ ಮೌಲ್ಯವನ್ನು ಗೌರವಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಅವರೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವ ವಿನೂತನ ಕಲ್ಪನೆ ಇದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್‌ ಶೆಟ್ಟಿ ಹಾಗೂ ಕಿರಣ್‌ ದೊಂಡೋಳೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.