ಕಾಸರಗೋಡು: ಕಾಞಂಗಾಡ್ ಬಳಿಯ ಇರಿಯದಲ್ಲಿ ಜ್ಯುವೆಲ್ಲರಿ ಮಾಲೀಕ ಬಾಲಚಂದ್ರನ್ ಪ್ರಯಾಣಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾಗಿಸಿ, ಮುಖಕ್ಕೆ ಮೆಣಸಿನ ಪುಡಿ ಎರಚಿದ ತಂಡ ಸಲೀಂ ಮತ್ತು ಸತ್ತಾರ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ರಾತ್ರಿ ಕಾರಿನಲ್ಲಿ ಬಂದ ಮೂವರು ಕೃತ್ಯ ಎಸಗಿದ್ದರು. ಸದ್ದು ಕೇಳಿ ಜನರು ಸೇರಿದಾಗ ಆರೋಪಿಗಳಿ ಪರಾರಿಯಾಗಿದ್ದರು. ಬಾಲಚಂದ್ರನ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದ ಆರೋಪಿ ಮುಹಮ್ಮದ್ ಅಶ್ರಫ್ (45) ಎಂಬಾತನನ್ನು ಪೊಕ್ಸೊ ಕಾಯಿದೆಯಡಿ ಪೊಲೀಸರು ಬಂಧಿಸಿದ್ದಾರೆ.
ನದಿಗೆ ಹಾರಿ ಯುವಕ ಆತಹತ್ಯೆ
ಕಾಸರಗೋಡು: ಚೆಮ್ನಾಡಿನ ಕೊಂಬನಡ್ಕ ಪಾಮಕ್ಕಡವು ನಿವಾಸಿ ಮುಹಮ್ಮದ್ ಅಯೂಬ್, ಚಂದ್ರಗಿರಿ ನದಿಗೆ ಹಾರಿ ಆತಹತ್ಯೆ ಮಾಡಿಕೊಳ್ಳಲು ಕಾರಣ ಪತ್ತೆ ಮಾಡುವಂತೆ ತಂದೆ ಅಹಮ್ಮದಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಜುಲೈ 12ರಂದು ಘಟನೆ ನಡೆದಿತ್ತು. ಸಾರ್ವಜನಿಕರ ಕಣ್ಣೆದುರಲ್ಲೇ ಯುವಕ ನದಿಗೆ ಹಾರಿದ್ದ. 16ರಂದು ಸಂಜೆ ತಳಂಗರೆಯ ಕೆ.ಕೆ.ಪುರಂನಲ್ಲಿ ಮೃತದೇಹ ಪತ್ತೆಯಾಗಿತ್ತು.
ಅಡಿಕೆ ಕಳ್ಳರಿಬ್ಬರ ಬಂಧನ
ಬದಿಯಡ್ಕ: ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಯಾಡಿ ಪರಪ್ಪ ನಿವಾಸಿ ಸಮೀರ್ ಅವರ ತೋಟದ ಮನೆಯಲ್ಲಿ ಶೇಖರಿಸಿಟ್ಟಿದ್ದ 130 ಕಿಲೋಗ್ರಾಂ ಅಡಿಕೆ ಕಳವು ಮಾಡಿದ ಪ್ರಕರಣದಲ್ಲಿ ಆಸ್ಕರ್ (22) ಹಾಗೂ ಅವಿನಾಶ್ (19) ಎಂಬವರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.