ಮಂಗಳೂರು: ಕೆನರಾ ಬ್ಯಾಂಕ್ ಆಶ್ರಯದಲ್ಲಿ ಈಚೆಗೆ ನಡೆದ ಪಾರ್ಲಿಮೆಂಟರಿ ಕಮಿಟಿ ಮೀಟ್ನಲ್ಲಿ ಇಂಗ್ಲಿಷ್ನಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು.
ಶ್ಯಾಡ್ಸ್ ಇವೆಂಟ್ ಸಂಯೋಜನೆಯಲ್ಲಿ ನಡೆದ ‘ಪ್ರಮೀಳಾರ್ಜುನ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ತೋನ್ಸೆ ಪುಷ್ಕಳ ಕುಮಾರ್, ಚೆಂಡೆ - ಮದ್ದಲೆಗಳಲ್ಲಿ ಶರತ್ ಕುಮಾರ್ ಕದ್ರಿ, ಸುದಾಸ್ ಕಾವೂರು ಮತ್ತು ಚಕ್ರತಾಳದಲ್ಲಿ ಹರಿಶ್ಚಂದ್ರ ನಾಯಗ, ಪಾತ್ರಧಾರಿಗಳಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಅರ್ಜುನ), ರವಿ ಅಲೆವೂರಾಯ ವರ್ಕಾಡಿ (ಪ್ರಮೀಳೆ), ಡಾ.ದಿನಕರ ಎಸ್.ಪಚ್ಚನಾಡಿ (ಅನುಸಾಲ್ವ) ಸಹಕರಿಸಿದರು.
ಕೆನರಾ ಬ್ಯಾಂಕ್ ಚೇರ್ಮನ್ ಹಾಗೂ ಕೇಂದ್ರ ಸಚಿವರಾದ ಬಿಹಾರದ ಅಖಿಲೇಶ್ ಪ್ರಸಾದ್ ಸಿಂಗ್ ಹಾಗೂ ರಾಜ್ಯಸಭಾ ಸದಸ್ಯರಾದ ವಂದನಾ ಚವಾನ್, ಅಮರ್ ಪಟ್ನಾಯಕ್, ಜೋಶ್ ಕೆ. ಮಣಿ, ತ್ರಿಚಿ ಶಿವಾ ಮೊದಲಾದವರು ಯಕ್ಷಗಾನವನ್ನು ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.