ADVERTISEMENT

ನಾಡಿಗೆ ಬಂದಿದ್ದ ಕಾಡುಕೋಣ ಸಾವು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 7:38 IST
Last Updated 9 ಏಪ್ರಿಲ್ 2018, 7:38 IST
ಕಾಡಿನಿಂದ ನಾಡಿಗೆ ಬಂದಿದ್ದ ಕಾಡುಕೋಣವೊಂದು ಚನ್ನಗಿರಿ ತಾಲ್ಲೂಕಿನ ಕೆಂಪಯ್ಯನ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಮೃತಪಟ್ಟಿದೆ.
ಕಾಡಿನಿಂದ ನಾಡಿಗೆ ಬಂದಿದ್ದ ಕಾಡುಕೋಣವೊಂದು ಚನ್ನಗಿರಿ ತಾಲ್ಲೂಕಿನ ಕೆಂಪಯ್ಯನ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಮೃತಪಟ್ಟಿದೆ.   

ದಾವಣಗೆರೆ: ಆಹಾರ, ನೀರು ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡು ಕೋಣವೊಂದು ಚನ್ನಗಿರಿ ತಾಲ್ಲೂಕಿನ ಕೆಂಪಯ್ಯನ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಾವನ್ನಪ್ಪಿದೆ.

ಶನಿವಾರ ಮನ್ನಾಜಂಗಲ್‌ ಅರಣ್ಯ ಪ್ರದೇಶ ಸಮೀಪ ಕಾಡುಕೋಣ ಕಾಣಿಸಿಕೊಂಡ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸಮೀಪದ ಅಡಿಕೆ ತೋಟ ಹೊಕ್ಕಿದ್ದ ಕಾಡುಕೋಣವನ್ನು ಸೆರೆಹಿಡಿಯಲು ಸಿಬ್ಬಂದಿ ಮುಂದಾಗಿದ್ದರು. ಸೆರೆ ಹಿಡಿಯುವಷ್ಟರಲ್ಲಿ ಅದು ಮೃತಪಟ್ಟಿದೆ ಎಂದು ಚನ್ನಗಿರಿ ವಲಯದ ಅರಣ್ಯಾಧಿಕಾರಿ ಮಾಹಿತಿ ನೀಡಿದರು.

ಕಾಯಿಲೆಯಿಂದ ಮೃತಪಟ್ಟಿರಬಹುದು. ಪ್ರಾಣಿಗಳು ದಾಳಿ ನಡೆಸಿರುವ ಗುರುತುಗಳು ಪತ್ತೆಯಾಗಿಲ್ಲ. ಗ್ರಾಮಸ್ಥರ ಮೇಲೂ ಕೋಣ ದಾಳಿ ನಡೆಸಿಲ್ಲ. ಕಾಡಿನಲ್ಲಿ ಮೇವು ಹಾಗೂ ನೀರಿನ ಕೊರತೆ ಉಂಟಾಗಿ ಸಾವನ್ನಪ್ಪಿರಬಹುದು ಎಂದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.