ದಾವಣಗೆರೆ: ಮಹಾನಗರ ಪಾಲಿಕೆಯ ನೂತನ ಮೇಯರ್ ಆಯ್ಕೆ ಮಾಡಲು ಏಪ್ರಿಲ್ 26ರಂದು ಚುನಾವಣೆ ನಡೆಯಲಿದೆ.ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತದ 5ನೇ ಅವಧಿಗೆ 6ನೇ ಮೇಯರ್ ಆಯ್ಕೆಗಾಗಿ ಈ ಚುನಾವಣೆ ನಡೆಯಲಿದೆ. ಪಕ್ಷದ ಆಂತರಿಕ ಒಪ್ಪಂದ ಮೇರೆಗೆ 2014ರಲ್ಲಿ ಪ್ರಥಮ ಬಾರಿಗೆ ರೇಣುಕಾಬಾಯಿ ವೆಂಕಟೇಶ್ ಮೇಯರ್ ಆಗಿ ಆಯ್ಕೆಯಾಗಿದ್ದರು. ನಂತರದ ಅವಧಿಯಲ್ಲಿ ಕ್ರಮವಾಗಿ ಗೋಣೆಪ್ಪ, ಅಶ್ವಿನಿ ಪ್ರಶಾಂತ್, ಗೌಡ್ರು ರಾಜಶೇಖರಪ್ಪ (ಪ್ರಭಾರ ಮೇಯರ್ 1 ತಿಂಗಳು), ರೇಖಾ ನಾಗರಾಜ್ ಅವರು ತಲಾ ಒಂದು ವರ್ಷದ ಅವಧಿಗೆ ಮೇಯರ್ ಆಗಿದ್ದರು. ಪ್ರಸ್ತುತ ಅನಿತಾಬಾಯಿ ಅವರು 5ನೇ ಅವಧಿಗೆ ಮೇಯರ್ ಆಗಿದ್ದಾರೆ ಎಂದು ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್ ತಿಳಿಸಿದರು.
‘ಏಪ್ರಿಲ್ 26ಕ್ಕೆ ಮೇಯರ್ ಚುನಾವಣೆ ನಡೆಯಲಿದ್ದು, ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಸಿ. ಶಿವಯೋಗಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಪಾಲಿಕೆ ಆಯುಕ್ತ ಇಸ್ಲಾವುದ್ದೀನ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.