ADVERTISEMENT

ರೇವಣ್ಣಗೆ ಮೇಣದ ಬತ್ತಿ ಕೊಡುಗೆ ನೀಡಿದ ಬಿಜೆಪಿ

ಪ್ರಧಾನಿ ಮೋದಿ ಹೇಳಿಕೆಗೆ ವ್ಯಂಗ್ಯ: ಬಿಜೆಪಿ ನಾಯಕರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 13:25 IST
Last Updated 4 ಏಪ್ರಿಲ್ 2020, 13:25 IST
ದಾವಣಗೆರೆಯಲ್ಲಿ ಶನಿವಾರ ದಕ್ಷಿಣ ಬಿಜೆಪಿ ಯುವ ಮೋರ್ಚಾದಿಂದ ಮೇಣದ ಬತ್ತಿಗಳನ್ನು ಶಾಸಕ ಎಚ್‌.ಡಿ. ರೇವಣ್ಣ ಅವರಿಗೆ ಸ್ಪೀಡ್‌ಪೋಸ್ಟ್ ಮೂಲಕ ಕಳುಹಿಸಲಾಯಿತು
ದಾವಣಗೆರೆಯಲ್ಲಿ ಶನಿವಾರ ದಕ್ಷಿಣ ಬಿಜೆಪಿ ಯುವ ಮೋರ್ಚಾದಿಂದ ಮೇಣದ ಬತ್ತಿಗಳನ್ನು ಶಾಸಕ ಎಚ್‌.ಡಿ. ರೇವಣ್ಣ ಅವರಿಗೆ ಸ್ಪೀಡ್‌ಪೋಸ್ಟ್ ಮೂಲಕ ಕಳುಹಿಸಲಾಯಿತು   

ದಾವಣಗೆರೆ: ದೀಪ ಬೆಳಗಿಸುವಪ್ರಧಾನಿ ಮೋದಿ ಹೇಳಿಕೆಗೆ ವ್ಯಂಗ್ಯವಾಡಿದ್ದ ಹೊಳೆನರಸೀಪುರ ಶಾಸಕ ಎಚ್‌.ಡಿ. ರೇವಣ್ಣ ಅವರಿಗೆ ಇಲ್ಲಿನದಕ್ಷಿಣ ಬಿಜೆಪಿ ಯುವ ಮೋರ್ಚಾದಿಂದ ಮೇಣದ ಬತ್ತಿಗಳನ್ನು ಸ್ಪೀಡ್‌ಪೋಸ್ಟ್ ಮೂಲಕ ಕಳುಹಿಸಲಾಯಿತು.

ಲಾಕ್‌ಡೌನ್ ಇರುವ ಕಾರಣ ಮೇಣದ ಬತ್ತಿ ತರುವುದುಹೇಗೆ, ಜ್ಯೋತಿ ಬೆಳಗುವುದು ಹೇಗೆ, ಬಡವರುಗೆ ₹ 10ರ ಕ್ಯಾಂಡಲ್ ಎಲ್ಲಿಂದ ತರುತ್ತಾರೆ.ಹೊರಗೆ ಹೋದರೆ ಪೊಲೀಸರು ಲಾಠಿ ಚಾರ್ಜ್‌ ಮಾಡುತ್ತಾರೆ ಎಂದುಎಚ್‌.ಡಿ. ರೇವಣ್ಣ ವ್ಯಂಗ್ಯವಾಡಿದ್ದರು.

ಕ್ಯಾಂಡಲ್ ತೆಗೆದುಕೊಂಡು ಕುಟುಂಬ ಸಮೇತ ಪಾಲ್ಗೊಳ್ಳುವಂತೆ ಮನವಿ ಮಾಡಿದ ಬಿಜೆಪಿ ಕಾರ್ಯಕರ್ತರು ಹೇಳಿಕೆಗೆ ತಿರುಗೇಟು ನೀಡಿದರು.

ADVERTISEMENT

‘ಹೊರಗೆ ಹೋಗಲಾರದ ನಿಮ್ಮ ಅಸಹಾಯಕತೆ ನಮಗೆ ತಿಳಿಯಿತು.ಪ್ರಧಾನಿ ಕರೆ ನೀಡಿದ ದೀಪ ಪ್ರಜ್ವಲನ ಕಾರ್ಯಕ್ರಮದಿಂದ ಎಲ್ಲರಿಗೂ ಒಳಿತಾಗಲಿದೆ. ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ನಿಮ್ಮಂತಹ ದೈವ ಭಕ್ತರ ಸಹಕಾರವೂ ಅತ್ಯವಶ್ಯಕ. ನಿಮ್ಮ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪಾಕೆಟ್‌ಗಳನ್ನು ಕಳುಹಿಸಿಕೊಡುತ್ತಿದ್ದು,ಕುಟುಂಬ ಸಮೇತರಾಗಿ ಪಾಲ್ಗೊಳ್ಳಿ’ ಎಂದು ತಿರುಗೇಟು ನೀಡಿದರು.

ಬಿಜೆಪಿ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್,ಆನಂದರಾವ್ ಸಿಂಧೆ, ಶ್ರೀಕಾಂತ್‌ ನಿಲಗುಂದ, ಟಿಂಕರ್ ಮಂಜಣ್ಣ, ಅಭಿಷೇಕ ಪಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.