ADVERTISEMENT

ಕಿರಾಣಿ ಅಂಗಡಿಯಿಂದ ನಗದು ಕಳವು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 6:58 IST
Last Updated 16 ಸೆಪ್ಟೆಂಬರ್ 2021, 6:58 IST

ಜಗಳೂರು: ತಾಲ್ಲೂಕಿನ ತಮಲೇಹಳ್ಳಿಯಲ್ಲಿ ಕಿರಾಣಿ ಅಂಗಡಿಗೆ ರಾತ್ರಿ ನುಗ್ಗಿರುವ ಕಳ್ಳರು ₹ 38 ಸಾವಿರ ಕಳವು ಮಾಡಿದ್ದಾರೆ.

ತಮಲೇಹಳ್ಳಿ ನಾಗರಾಜ್‌ ಅವರ ಅಂಗಡಿ ಮತ್ತು ಮನೆ ಒಂದೇ ಕಟ್ಟಡದಲ್ಲಿದ್ದು, ಮಂಗಳವಾರ ರಾತ್ರಿ ವ್ಯಾಪಾರ ಮುಗಿದ ಮೇಲೆ ಗಲ್ಲಾಪೆಟ್ಟಿಗೆಯಲ್ಲಿ ₹ 38 ಸಾವಿರ ಇಟ್ಟು ಅಂಗಡಿ ಬಾಗಿಲು ಹಾಕಿದ್ದರು. ಬಳಿಕ ಪತ್ನಿ ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದರು. ಮರುದಿನ ನೋಡುವಾಗ ಆ ಹಣ ಇರಲಿಲ್ಲ. ಮನೆಯ ಹೆಂಚು ತೆಗೆದಿರುವುದು ಕಂಡು ಬಂದಿದ್ದು, ಹೆಂಚುತೆಗೆದು ಯಾರೋ ಒಳಗೆ ಬಂದು ಕಳವು ಮಾಡಿದ್ದಾರೆ ಎಂದು ನಾಗರಾಜ್‌ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಹನ ಡಿಕ್ಕಿ ಅಪರಿಚಿತ ವ್ಯಕ್ತಿ ಸಾವು

ADVERTISEMENT

ಹರಿಹರ: ಇಲ್ಲಿನ ಹರಿಹರ–ಶಿವಮೊಗ್ಗ ರಸ್ತೆಯಲ್ಲಿ ಇಂಡಿಯನ್‌ ಡಾಬಾ ಬಳಿ ಯಾವುದೋ ವಾಹನ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.

ಸುಮಾರು 60 ವರ್ಷದ ವ್ಯಕ್ತಿಗೆ ಯಾವುದೋ ವಾಹನ ಡಿಕ್ಕಿಯಾಗಿ ಪರಾರಿಯಾಗಿತ್ತು. 112 ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದಾರೆ. ನಗರಸಭೆ ಮಾಜಿ ಸದಸ್ಯ ಸಯಯದ್‌ ರಶೀದ್ ಸಾಬ್ ನೀಡಿದ ದೂರಿನಂತೆ ಹರಿಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವು ದಾವಣಗೆರೆ ಸಿಜಿ ಆಸ್ಪತ್ರೆಯ ಶವಗಾರದ ಇರಿಸಲಾಗಿದೆ. ಈ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.