ADVERTISEMENT

ದೊಮ್ಮಿ ಹುಳ ಕಾಟ: ಶೇಂಗಾ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 6:19 IST
Last Updated 14 ಸೆಪ್ಟೆಂಬರ್ 2021, 6:19 IST
ಶೃಂಗಾರತೋಟದ ಜಮೀನಿನ ಸೇವಂತಿ ಬೆಳೆಯಲ್ಲಿ ಕಂಡುಬಂದಿರುವ ಹುಳು
ಶೃಂಗಾರತೋಟದ ಜಮೀನಿನ ಸೇವಂತಿ ಬೆಳೆಯಲ್ಲಿ ಕಂಡುಬಂದಿರುವ ಹುಳು   

ಹರಪನಹಳ್ಳಿ: ತಾಲ್ಲೂಕಿನ ಶೃಂಗಾರತೋಟ ಗ್ರಾಮದಲ್ಲಿ ಶೇಂಗಾ ಬೆಳೆಗೆ ಎಲೆ ತಿನ್ನುವ ದೊಮ್ಮಿ ಹುಳ ಕಾಟ ಹೆಚ್ಚಿದ್ದು,ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ತಾಲ್ಲೂಕಿನ ಕೆಲವೆಡೆ ಈರುಳ್ಳಿಗೆ ಕೊಳೆ ರೋಗ ಕಾಣಿಸಿಕೊಂಡು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶೃಂಗಾರತೋಟ, ಅಲರಸೀಕೆರೆ, ಬಾಗಳಿ, ದಡಗಾರನಹಳ್ಳಿ, ಕಾಯಕದಹಳ್ಳಿ ಸುತ್ತಮುತ್ತ ಜಮೀನುಗಳಲ್ಲಿ ದೊಮ್ಮಿ ಹುಳು ಬಾಧೆ ಹೆಚ್ಚಾಗಿದೆ. ಇದರಿಂದ ಶೇಂಗಾ, ಸೇವಂತಿ, ಈರುಳ್ಳಿ ಬೆಳೆ ನಷ್ಟವಾಗಿದೆ.

ರೈತರು ಯಾವುದೇ ಔಷಧ ತಂದು ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ದಿನದಿಂದ ದಿನಕ್ಕೆ ಹೊಲವನ್ನೇ ಹುಳಗಳು ತಿಂದು ಹಾಕುತ್ತಿವೆ. ಶೃಂಗಾರತೋಟದ ಕುರಿ ರಾಮಪ್ಪ ಅವರ 2 ಎಕರೆ, ಹನುಮಂತ ಅವರ ಒಂದೂವರೆ ಎಕರೆ ಶೇಂಗಾ ಬೆಳೆ ನಾಶವಾಗಿದೆ. ಸುತ್ತಮುತ್ತಲ ಗ್ರಾಮಗಳಲ್ಲೂ ಹುಳಗಳ ಹಾವಳಿ ಹೆಚ್ಚಾಗುತ್ತಿದೆ. ಈರುಳ್ಳಿ, ಶೇಂಗಾ, ಸೇವಂತಿ ಬೆಳೆ ನಾಶವಾಗಿರುವ ರೈತರಿಗೆ ಸರ್ಕಾರ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದು ರೈತ ಉಪ್ಪಾರ ಬಸವರಾಜ್
ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.