ADVERTISEMENT

ಅನ್ನಪೂರ್ಣೇಶ್ವರಿ ದೇವಾಲಯ ಗೋಪುರದ ಕಳಶ ಪ್ರತಿಷ್ಟಾಪನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 14:32 IST
Last Updated 12 ಜೂನ್ 2019, 14:32 IST
ದಾವಣಗೆರೆಯ ದೇವರಾಜ ಅರಸು ಬಡಾವಣೆಯ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ಗೋಪುರದ ಕಳಶ ಪ್ರತಿಷ್ಠಾಪನೆ ಬುಧವಾರ ನೆರವೇರಿತು.
ದಾವಣಗೆರೆಯ ದೇವರಾಜ ಅರಸು ಬಡಾವಣೆಯ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ಗೋಪುರದ ಕಳಶ ಪ್ರತಿಷ್ಠಾಪನೆ ಬುಧವಾರ ನೆರವೇರಿತು.   

ದಾವಣಗೆರೆ: ಇಲ್ಲಿನ ದೇವರಾಜ ಅರಸು ಬಡಾವಣೆಯ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ಗೋಪುರದ ಕಳಶ ಪ್ರತಿಷ್ಠಾಪನೆ ಬುಧವಾರ ನೆರವೇರಿತು.

ರಾಮಕೃಷ್ಣ ಆಶ್ರಮದ ಸ್ವಾಮಿ ತೀರ್ಥ ಕರಾನಂದಜೀ ಮಹಾರಾಜ್ ಕಳಶ ಪ್ರತಿಷ್ಠಾಪನೆ ನೆರವೇರಿಸಿದರು.

ಬಸವಾಪಟ್ಟಣದ ರಾಂಪುರ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿ ಮಾತನಾಡಿ ‘ಕಳಶವನ್ನು ನೋಡಿದರೆ ಭಕ್ತಿಪೂರ್ವಕವಾಗಿ ದೇವರು ನೋಡಿದಷ್ಟು ಪುಣ್ಯ ಸಿಗುತ್ತದೆ. ಅಂದುಕೊಂಡ ಕೆಲಸವಾಗುತ್ತದೆ’ ಎಂದರು.

ADVERTISEMENT

ಕಳಸವನ್ನು ಏಕೆ ಇಡಬೇಕು, ಅದರ ಉಪಯೋಗ ಹಾಗೂ ಕಳಸ, ದೇವರು ಹಾಗೂ ಮನುಷ್ಯನಿಗೂ ಸಂಬಂಧಗಳ ಬಗ್ಗೆ ವಿವರಿಸಿದರು.

ಆರ್. ಜಿ.ನಾಗೇಂದ್ರಪ್ರಸಾದ್‌, ಬಿ.ವಿ.ಗಂಗಪ್ಪಶೆಟ್ಟಿ, ವೆಂಕಟಾಚಲಪತಿ, ಕಡೆಕೊಪ್ಪ ನಾಗಭೂಷಣ್, ಪ್ರಕಾಶ್‌ ಪಾಟೀಲ್, ವೈ.ಬಿ.ಸತೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.