ಕಡರನಾಯ್ಕನಹಳ್ಳಿ: ಗ್ರಾಮದ ರೈತ ಕೆ.ಎಚ್. ಕಾಶಿನಾಥ್ (38) ಭಾನುವಾರ ತಡರಾತ್ರಿ ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಕಡರನಾಯ್ಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹ 2 ಲಕ್ಷ ಸಾಲ ಪಡೆದಿದ್ದರು. ಎರಡು ಎಕರೆ ಜಮೀನಿನಲ್ಲಿ ಇಳುವರಿ ಕಡಿಮೆ ಮತ್ತು ಈ ಬಾರಿ ಬತ್ತದ ದರ ಕಡಿಮೆ ಇರುವುದರಿಂದ ಬೇಸತ್ತಿದ್ದರು’ ಎಂದು ಸಹೋದರ ಕೆ.ಎಚ್. ತಿಪ್ಪೇಸ್ವಾಮಿ ಮಲೇಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.