
ಪ್ರಜಾವಾಣಿ ವಾರ್ತೆದಾವಣಗೆರೆ: ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ಯರಗುಂಟೆ ಗ್ರಾಮದ ಸೇಲ್ಸ್ಮ್ಯಾನ್ ಒಬ್ಬರಿಗೆ ₹39,996 ವಂಚಿಸಿದ್ದಾನೆ.
ಜಿ.ಎಂ. ಮಹಾಸ್ವಾಮಿ ವಂಚನೆಗೆ ಒಳಗಾದವರು. ಮಹಾಸ್ವಾಮಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದಾಗ ಹಣ ಕಡಿತಗೊಂಡಿರುವ ಬಗ್ಗೆ ಮೆಸೇಜ್ ಬಂದಿದೆ. ಆದರೆ ಹಣ ಬರಲಿಲ್ಲ. ಇದರಿಂದಾಗಿ ಕಸ್ಟಮರ್ ಕೇರ್ ನಂಬರ್ಗೆ ಫೋನ್ ಮಾಡಿದಾಗ ಆತ ಹಿಂದಿಯಲ್ಲಿ ಮಾತನಾಡಿ ಎಟಿಎಂ ಕಾರ್ಡ್ ವಿವರಗಳನ್ನು ಪಡೆದಿದ್ದಾನೆ.
ವಿವರ ನೀಡಿದ ನಂತರ ನಾಲ್ಕು ಬಾರಿ ಹಣ ಕಡಿತಗೊಂಡಿದೆ. ಸಿಇಎನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.