ADVERTISEMENT

ಕಸ್ಟಮರ್ ಕೇರ್ ಅಧಿಕಾರಿ ಹೆಸರಿನಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:47 IST
Last Updated 3 ಜುಲೈ 2020, 16:47 IST

ದಾವಣಗೆರೆ: ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ಯರಗುಂಟೆ ಗ್ರಾಮದ ಸೇಲ್ಸ್‌ಮ್ಯಾನ್‌ ಒಬ್ಬರಿಗೆ ₹39,996 ವಂಚಿಸಿದ್ದಾನೆ.

ಜಿ.ಎಂ. ಮಹಾಸ್ವಾಮಿ ವಂಚನೆಗೆ ಒಳಗಾದವರು. ಮಹಾಸ್ವಾಮಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದಾಗ ಹಣ ಕಡಿತಗೊಂಡಿರುವ ಬಗ್ಗೆ ಮೆಸೇಜ್ ಬಂದಿದೆ. ಆದರೆ ಹಣ ಬರಲಿಲ್ಲ. ಇದರಿಂದಾಗಿ ಕಸ್ಟಮರ್ ಕೇರ್ ನಂಬರ್‌ಗೆ ಫೋನ್ ಮಾಡಿದಾಗ ಆತ ಹಿಂದಿಯಲ್ಲಿ ಮಾತನಾಡಿ ಎಟಿಎಂ ಕಾರ್ಡ್ ವಿವರಗಳನ್ನು ಪಡೆದಿದ್ದಾನೆ.

ವಿವರ ನೀಡಿದ ನಂತರ ನಾಲ್ಕು ಬಾರಿ ಹಣ ಕಡಿತಗೊಂಡಿದೆ. ಸಿಇಎನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.