ದಾವಣಗೆರೆ:ಇಲ್ಲಿನ ಪಿ.ಜೆ.ಬಡಾವಣೆಯ ಮುದ್ದಳ್ಳಿ ತೋಟದ ಜೊಳ್ಳಿ ಕಾಂಪೌಂಡ್ ಬಳಿ ಬೈಕ್ನಲ್ಲಿ ಬಂದ ಕಳ್ಳರು ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕುತ್ತಿಗೆಯಿಂದ ₹ 2ಲಕ್ಷ ಮೌಲ್ಯದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಲಕ್ಷ್ಮಿ ಅಳ್ಳೊಳ್ಳಿ ಸರ ಕಳೆದುಕೊಂಡವರು. ಕಿರಾಣಿ ಅಂಗಡಿಯಲ್ಲಿ ದಿನಸಿ ಖರೀದಿಸಿ ಮನಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ 40 ಗ್ರಾಂನ ₹1.60 ಲಕ್ಷ ಮೌಲ್ಯದ ಎರಡೆಳೆಯ ಥ್ರೀ ರಿಂಗ್ಸ್ ಕಟಿಂಗ್ನ ಬಂಗಾರದ ಸರ ಹಾಗೂ 10 ಗ್ರಾಂನ ₹ 40 ಸಾವಿರ ಮೌಲ್ಯದ ಒಂದೆಳೆ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ.
ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.