ADVERTISEMENT

ಧೂಡಾ ಅಧ್ಯಕ್ಷರಿಗೆ ಜೀವ ಬೆದರಿಕೆ ಪತ್ರ: ದೂರು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 6:36 IST
Last Updated 4 ಡಿಸೆಂಬರ್ 2020, 6:36 IST
ರಾಜನಹಳ್ಳಿ ಶಿವಕುಮಾರ್
ರಾಜನಹಳ್ಳಿ ಶಿವಕುಮಾರ್   

ದಾವಣಗೆರೆ: ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಅವರಿಗೆ ಜೀವ ಬೆದರಿಕೆಯ ಪತ್ರ ಬಂದಿದ್ದು, ಈ ಬಗ್ಗೆ ಬಸವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಎಸ್‌.ಎಸ್‌. ಮಾಲ್‌ ಸಹಿತ ಸರ್ಕಾರಿ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಕಟ್ಟಡವನ್ನು ಕಟ್ಟಿರುವುದನ್ನು ತೆರವು
ಗೊಳಿಸಲಾಗುವುದು. ಇದರಲ್ಲಿ ಎಸ್‌.ಎಸ್‌. ಗಣೇಶ್‌ ಅವರಿಗೆ ಸೇರಿದ ಎಸ್‌.ಎಸ್‌. ಮಾಲ್‌ ಕೂಡಾ ಸೇರಿದೆ. ಈಗ ಅನಾಮಧೇಯ ಪತ್ರ ಬಂದಿದೆ. ಎಸ್‌.ಎಸ್‌. ಮಾಲ್‌ ಅನ್ನು ಧ್ವಂಸ ಮಾಡಿ ನೋಡು, ನಿನ್ನನ್ನು ಜೀವ ಸಹಿತ ನಿರ್ವಂಶ ಮಾಡಿ ಬಿಡುತ್ತೇನೆ ಎಂದು ಅವಾಚ್ಯವಾಗಿ ಬೈದು ಬರೆಯಲಾಗಿದೆ. ಹಿಂದೆ ಮಹಾದೇವ ಅನ್ನುವವರು ಇದರ ವಿರುದ್ಧ ಹೋರಾಟ ಮಾಡಿದ್ದರು. ಆಗ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಬಳಿಕ ಅವರು ಮೃತಪಟ್ಟಿದ್ದರು. ಅದೇ ರೀತಿ ನನಗೆ ಜೀವ ಬೆದರಿಕೆ ಬಂದಿದೆ. ಇದರ ಹಿಂದೆ ಎಸ್‌.ಎಸ್‌. ಮಾಲ್‌ನ ಮಾಲೀಕರ ಕೈವಾಡ ಇರುವ ಬಗ್ಗೆ ಸಂಶಯವಿದೆ’ ಎಂದು ರಾಜನಹಳ್ಳಿ ಶಿವಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಧೂಡಾ ಕಚೇರಿ ವಿಳಾಸಕ್ಕೆ ಬಂದಿರುವ ಪತ್ರವನ್ನು ದೂರಿನ ಜತೆಗೆ ಲಗತ್ತಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.