ADVERTISEMENT

ಅಂತರ್ ಜಿಲ್ಲಾ ಬೈಕ್‍ ಕಳವು ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 5:49 IST
Last Updated 2 ಆಗಸ್ಟ್ 2019, 5:49 IST
ಕಳವಾದ ಬೈಕ್‌ಗಳನ್ನು ಹರಿಹರ ನಗರಠಾಣೆಯ ಪೊಲೀಸರು ಗುರುವಾರ ವಶಪಡಿಸಿಕೊಂಡರು
ಕಳವಾದ ಬೈಕ್‌ಗಳನ್ನು ಹರಿಹರ ನಗರಠಾಣೆಯ ಪೊಲೀಸರು ಗುರುವಾರ ವಶಪಡಿಸಿಕೊಂಡರು   

ಹರಿಹರ: ತುಮಕೂರು ಜಿಲ್ಲೆಯ ಶಿರಾ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಾಗೂ ದಾವಣಗೆರೆ ಜಿಲ್ಲೆಯ ಹರಿಹರ ಸುತ್ತಮುತ್ತ ಬೈಕ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಗುರುವಾರ ಹರಿಹರ ನಗರ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಶಿರಾದ ಶೇಖ್‍ ವಾಜೀದ್‍ (30) ಬಂಧಿತ ಆರೋಪಿ. ಈತನಿಂದ ₹ 1.5 ಲಕ್ಷ ಮೌಲ್ಯದ 5 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶೇಖ್‍ ವಾಜೀದ್‍ ಮೆಕ್ಯಾನಿಕ್‍ ಕೆಲಸ ಮಾಡುತ್ತಿದ್ದು, ಕಳವು ಮಾಡಿದ ಬೈಕ್‍ಗಳ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್‍ ಸಿಬ್ಬಂದಿಗೆ ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಆರ್‍. ಚೇತನ್‌ ನಗದು ಬಹುಮಾನ ಘೋಷಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.