ADVERTISEMENT

ಮಂಗಳೂರಿನಲ್ಲಿ ಬಿಲ್ಲವ ನಾಯಕರು, ಸ್ವಾಮೀಜಿಗಳ ಸಭೆ: ಪ್ರಣವಾನಂದ ಸ್ವಾಮೀಜಿ

ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 6:04 IST
Last Updated 12 ಸೆಪ್ಟೆಂಬರ್ 2022, 6:04 IST

ದಾವಣಗೆರೆ: ‘ಬಿಲ್ಲವ ಸಮುದಾಯದ ವಿವಿಧ ಬೇಡಿಕೆಗಳ ಸಂಬಂಧ ಸರ್ಕಾರದ ಗಮನ ಸೆಳೆಯಲು 10 ದಿನಗಳಲ್ಲಿ ಮಂಗಳೂರಿನಲ್ಲಿ ಬಿಲ್ಲವ, ನಾಮದಾರಿ ನಾಯಕರು ಹಾಗೂ ಸ್ವಾಮೀಜಿಗಳ ಸಭೆ ನಡೆಸಲಾಗುವುದು’ ಎಂದುಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.

‘ಸರ್ಕಾರ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಬಿಲ್ಲವರ ಕುಲಕಸುಬು ಘೋಷಣೆ ಮಾಡುವುದಾಗಿ ಭರವಸೆ ನೀಡಿತ್ತು. ಈವರೆಗೆ ಘೋಷಣೆ ಮಾಡಿಲ್ಲ. ನಮ್ಮ ಸಮುದಾಯದ 7 ಶಾಸಕರು ಹಾಗೂ ಇಬ್ಬರು ಸಚಿವರು ಧ್ವನಿ ಎತ್ತುತ್ತಿಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿಆರೋಪಿಸಿದರು.

‘ದಕ್ಷಿಣಕನ್ನಡ ಜಿಲ್ಲೆಯಲ್ಲಿ 5.36ಲಕ್ಷ, ಉಡುಪಿಯಲ್ಲಿ 3 ಲಕ್ಷ ಬಿಲ್ಲವ ಸಮುದಾಯದ ಜನರಿದ್ದು, ಅವರನ್ನು ಒಡೆದು ಆಡಳಿತ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ನಡೆಯುವುದಿಲ್ಲ. ಪ್ರವೀಣ್‌ ನೆಟ್ಟಾರು ಏತಕ್ಕಾಗಿ ಸತ್ತರು. ಬರೀ ಬಿಲ್ಲವರಷ್ಟೇ ಸಾಯಬೇಕಾ? ದೇಶ ಧರ್ಮ ಹೇಳಿಕೊಂಡು ಇಂತಹ ಹುನ್ನಾರಕ್ಕೆ ಒಳಪಡಬಾರದು’ ಎಂದರು.

ADVERTISEMENT

ಆಕ್ಷೇಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರದಿಂದ ನಾರಾಯಣಗುರು ಜಯಂತಿ ಆಚರಿಸದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಪಕ್ಷದ ಕಾರ್ಯಕ್ರಮದಲ್ಲಿ ನಾರಾಯಣಗುರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿರುವುದು ಖಂಡನೀಯ. ಜಿಲ್ಲಾ ಕೇಂದ್ರಗಳಲ್ಲಿನ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳೇ ಭಾಗವಹಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಚ್.ವೈ.ಆನಂದ್, ಆರ್.ಪ್ರತಾಪ್, ಜ್ಞಾನದೇವ, ಪ್ರಕಾಶ್, ಬಾಲರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.