ADVERTISEMENT

ಕತ್ತು ಕೊಯ್ದು ವೃದ್ಧರೊಬ್ಬರ ಕೊಲೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 14:26 IST
Last Updated 10 ಅಕ್ಟೋಬರ್ 2019, 14:26 IST
ಬಾಲಚಂದ್ರಪ್ಪ
ಬಾಲಚಂದ್ರಪ್ಪ   

ದಾವಣಗೆರೆ: ಇಲ್ಲಿನ ಎಂಸಿಸಿ ಬಿ. ಬ್ಲಾಕ್‌ನಲ್ಲಿರುವ ಈಜುಕೊಳದ ಬಳಿಯ ಮನೆಯಲ್ಲಿದ್ದ ವೃದ್ಧರೊಬ್ಬರ ಕುತ್ತಿಗೆ ಕೊಯ್ದು ಬುಧವಾರ ರಾತ್ರಿ ಕೊಲೆ ಮಾಡಲಾಗಿದೆ.

ಎಪಿಎಂಸಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಬಾಲಚಂದ್ರಪ್ಪ (70) ಕೊಲೆಗೀಡಾದವರು. ಅವರ ಪತ್ನಿ ಇತ್ತೀಚೆಗೆ ನಿಧನರಾಗಿದ್ದರು. ಮಗ ಹರೀಶ್‌ ಜತೆ ವಾಸಿಸುತ್ತಿದ್ದು, ಹರೀಶ್‌ ಬುಧವಾರ ಹೊರಗೆ ಹೋಗಿದ್ದರು. ರಾತ್ರಿ 1 ಗಂಟೆಯ ಹೊತ್ತಿಗೆ ಮನೆಗೆ ಬಂದಾಗ ತಂದೆ ಕೊಲೆಗೀಡಾಗಿರುವುದು ಗೊತ್ತಾಗಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಳವಾಗಿಲ್ಲ. ಹಾಗಾಗಿ ಯಾರೋ ಗೊತ್ತಿರುವವರೇ ಕೊಲೆ ಮಾಡಿರಬೇಕು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಎಸ್‌ಪಿ ಹನುಮಂತರಾಯ ಭೇಟಿ ನೀಡಿದ್ದಾರೆ. ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.