ADVERTISEMENT

ಫಲವನಹಳ್ಳಿ: ಹೆಬ್ಬಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 5:58 IST
Last Updated 28 ಜುಲೈ 2021, 5:58 IST
ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ಶುಂಠಿ ಹೊಲದಲ್ಲಿ ಹೆಬ್ಬಾವನ್ನು ಹಿಡಿದ ಶಿವಮೊಗ್ಗ ಸ್ನೇಕ್ ಕಿರಣ್.
ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ಶುಂಠಿ ಹೊಲದಲ್ಲಿ ಹೆಬ್ಬಾವನ್ನು ಹಿಡಿದ ಶಿವಮೊಗ್ಗ ಸ್ನೇಕ್ ಕಿರಣ್.   

ಫಲವನಹಳ್ಳಿ (ನ್ಯಾಮತಿ): ಗ್ರಾಮದ ಹೊರವಲಯದ ರೈತರೊಬ್ಬರ ಶುಂಠಿ ಹೊಲದಲ್ಲಿ ಭಾರಿ ಗ್ರಾತ್ರದ ಹೆಬ್ಬಾವು ಮಂಗಳವಾರ ಕಂಡು ಬಂದಿದ್ದು, ಅರಣ್ಯ ಇಲಾಖೆ ಸಹಕಾರದಲ್ಲಿ ಕಾಡಿಗೆ ಸುರಕ್ಷಿತವಾಗಿ ಬಿಟ್ಟು ಬರಲಾಯಿತು.

‘ರೈತರು ಇಲಾಖೆ ಗಮನಕ್ಕೆ ತಂದ ತಕ್ಷಣ ಶಿವಮೊಗ್ಗ ಸ್ನೇಕ್ ಕಿರಣ್‌ ಅವರನ್ನು ಕರೆಯಿಸಿ ಹೆಬ್ಬಾವನ್ನು ರಕ್ಷಿಸಿ, ದೂರದ ಅರಣ್ಯಕ್ಕೆ ಬಿಡಲಾಯಿತು. ಹೆಬ್ಬಾವು 8ರಿಂದ 10 ಅಡಿ ಉದ್ದ, 15ರಿಂದ 18 ಕೆ.ಜಿ. ತೂಕವಿತ್ತು’ ಎಂದು ಉಪವಲಯ ಅರಣ್ಯಾಧಿಕಾರಿ ಎಚ್. ಕೃಷ್ಣಮೂರ್ತಿ ತಿಳಿಸಿದರು.

ಅರಣ್ಯ ರಕ್ಷಕ ನಿಂಗರಾಜ ಹರವಿ, ಅರಣ್ಯ ವೀಕ್ಷಕ ಬಸವರಾಜಪ್ಪ, ಚಂದ್ರಪ್ಪ ಅವರೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.