ದಾವಣಗೆರೆ: ಕೊರೊನಾ ವೈರಸ್ ಸೋಂಕಿನ ತಲೆಬಿಸಿ ಮತ್ತು ಬೇಸಿಗೆಯ ಬಿಸಿಯನ್ಪು ಭಾನುವಾರ ಸುರಿದ ಮಳೆ ಸ್ವಲ್ಪ ತಣ್ಣಗಾಗಿಸಿತು.
ಗಾಳಿ, ಗುಡುಗು, ಮಿಂಚಿನೊಂದಿಗೆ ರಾತ್ರಿ 7 ಗಂಟೆಯ ಸುಮಾರಿಗೆ ಆಲಿಕಲ್ಲು ಮಳೆ ಆರಂಭಗೊಂಡಿತು. ಸುಮಾರು ಮುಕ್ಕಾಲು ಗಂಟೆ ಸುರಿಯಿತು. ಜನ ಲಾಕ್ಡೌನ್ ಮರೆತು ಮೊದಲ ಮಳೆ ಆಸ್ವಾದಿಸಿದರು.
ಹುಮ್ನಾಬಾದ್ ಮತ್ತಿತರ ಕಡೆಗಳಿಂದ ಬಂದು ಪಿ.ಬಿ. ರಸ್ತೆಯ ಬದಿಯಲ್ಲಿ ಟೆಂಟ್ ಹಾಕಿ ಜೀವನ ಮಾಡುತ್ತಿದ್ದವರ ಟೆಂಟ್ಗಳಿಗೆ ಮಳೆಯಿಂದ ತೊಂದರೆಯಾಗಿದೆ. ಅಲ್ಲಿದ್ದ ಸುಮಾರು 40 ಜನರನ್ನು ನರಹರಿ ಶೇಟ್ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.