ADVERTISEMENT

ಟ್ರೇಲರ್ ಮಗುಚಿ ಅಪಘಾತ: ಒಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 4:01 IST
Last Updated 15 ಡಿಸೆಂಬರ್ 2020, 4:01 IST

ದಾವಣಗೆರೆ: ಆನಗೋಡು-ಸಾಸಲು ರಸ್ತೆಯ ಓಬೇನಹಳ್ಳಿ ಕ್ರಾಸ್ ಹತ್ತಿರ ಟ್ರ್ಯಾಕ್ಟರ್‌ನಲ್ಲಿ ಅಡಿಕೆ ತುಂಬಿಕೊಂಡು ಬರುತ್ತಿರುವ ವೇಳೆ ಟ್ರೇಲರ್ ಮಗುಚಿ ಒಬ್ಬರು ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ.

ಗುಡ್ಡದ ರಂಗವ್ವನಹಳ್ಳಿ ಗ್ರಾಮದ ಉಮೇಶ್ ಬಾಬು (40) ಮೃತರು.ಮಾರುತಿ, ಕಣುಮೇಶ ಹಾಗೂ ಗಜೇಂದ್ರ ಅವರಿಗೆ ಗಾಯಗಳಾಗಿವೆ.

ಹಿರೇಕಂದವಾಡಿಯ ಗ್ರಾಮದ ತೋಟದಲ್ಲಿ ಅಡಿಕೆ ಕೊಯ್ದು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ವೇಗವಾಗಿ ಬರುತ್ತಿರುವ ವೇಳೆ ಚಾಲಕ ಹಂಪ್ಸ್‌ ಮೇಲೆ ಹತ್ತಿಸಿದ ಪರಿಣಾಮ ಟ್ರೇಲರ್ ಪಲ್ಟಿಯಾಗಿ ಕೆಳಗೆ ಬಿದ್ದು, ಗಾಯಗೊಂಡಿದ್ದ ಉಮೇಶ್‌ ಬಾಬು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಾಯಕೊಂಡ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.