
ಪ್ರಜಾವಾಣಿ ವಾರ್ತೆಧಾರವಾಡ: ಇಲ್ಲಿಯ ರೈಲ್ವೆ ನಿಲ್ದಾಣಕ್ಕೆ ಸೋಮವಾರ ರಾತ್ರಿ ಆಗಮಿಸಿದ ಬೆಂಗ ಳೂರು-ಧಾರವಾಡ ಇಂಟರ್ಸಿಟಿ ರೈಲಿನಲ್ಲಿ ಸುಮಾರು ಮೂರು ವರ್ಷದ ಗಂಡುಮಗುವನ್ನು ಪೋಷ ಕರು ಬಿಟ್ಟು ಹೋದ ಘಟನೆ ನಡೆದಿದ್ದು, ರೈಲ್ವೆ ಪೊಲೀಸರು ಮಗುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ಮಗುವಿಗೆ ತಲೆಯಲ್ಲಿ ಗಾಯ ವಾಗಿದ್ದು, ಸೊಂಟದ ಕೆಳಭಾಗವೂ ಸ್ವಾಧೀನ ಕಳೆದು ಕೊಂಡಿದ್ದರಿಂದ ನಡೆ ಯಲು ಸಾಧ್ಯವಾಗುವುದಿಲ್ಲ. ಮುಖ ವನ್ನೂ ಅತ್ತಿತ್ತ ತಿರುಗಿ ಸುವುದು ಸಾಧ್ಯವಾಗುವುದಿಲ್ಲ. ಇದನ್ನು ಅರಿತೇ ಯಾರೋ ಬಡ ಪೋಷಕರು ಮಗುವನ್ನು ರೈಲಿನಲ್ಲಿ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.
ವಿಷಯ ತಿಳಿದ ಬಳಿಕ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದ ಮಕ್ಕಳ ಸಹಾಯವಾಣಿಯ ಕಾರ್ಯಕರ್ತೆಯರು ಮಗು ವಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಬಾಲಮಂದಿರಕ್ಕೆ ಆರೈಕೆಗೆ ಕರೆದೊಯ್ದರು. ವಾರಸುದಾರರು ರೈಲ್ವೆ ಪೊಲೀಸ ರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.