ಹುಬ್ಬಳ್ಳಿ: ಭೂಮಿಯ ಹಕ್ಕಿಗಾಗಿ ನೂರು ರೈತರು ‘ವ್ಯತಿರಿಕ್ತ ಸ್ವಾಧೀನ’ (ಅಡ್ವರ್ಸ ಪೊಸೆಷನ್) ಹಕ್ಕು ಅಡಿ ಪ್ರಕರಣ ದಾಖಲಿಸಲು ಇದೇ 6ರಂದು ಏಕಕಾಲಕ್ಕೆ ಕಲಘಟಗಿ ಜೆಎಂಎಫ್ ಮತ್ತು ಸಿವಿಲ್ (ದಿವಾನ) ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಹೊಸ ದಾಖಲೆಗೆ ಸಾಕ್ಷಿಯಾಗಲಿದ್ದಾರೆ!
ನ್ಯಾಯಾಲಯದಲ್ಲಿ ರೈತರು ಪ್ರತ್ಯೇಕವಾಗಿ ಸಿವಿಲ್ ಪ್ರಕರಣ ದಾಖಲಿಸಿಕೊಳ್ಳಲು ಧಾರವಾಡ ವಕೀಲರ ಸಂಘದ ಮಾಜಿ ಅಧ್ಯಕ್ಷ, ರಾಮನಗರ ನಿವಾಸಿ ರಾಜಶೇಖರ ಐ. ಸವದತ್ತಿ ನೆರವಾಗಲಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ಒಂದೇ ಬಾರಿಗೆ ನೂರು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ 1992ರಲ್ಲಿ ಏಕಕಾಲಕ್ಕೆ 92 ಪ್ರಕರಣ ದಾಖಲಾಗಿರುವುದು ಈವರೆಗಿನ ದಾಖಲೆ’ ಎಂದರು.
‘ಇದೇ 6ರಂದು ಮುಂಜಾನೆ 10.30ಕ್ಕೆ ಗಳಗಿ ಹುಲಕೊಪ್ಪ, ಆರ್.ಪಿ. ಬಸನಕೊಪ್ಪ, ಸಿ.ಜಿ. ಗತ್ತಿ, ಹಸರಂಬಿ ಮತ್ತಿತರ ಹಳ್ಳಿಗಳ 199 ಕುಟುಂಬಗಳು ನ್ಯಾಯಾಲಯದ ಆವರಣಕ್ಕೆ ಬರಲಿದ್ದಾರೆ’ ಎಂದರು.
‘ಹನ್ನೆರಡು ವರ್ಷಗಳಿಂದ ನೆಲೆಸಿದ್ದರೂ ಭೂಮಿ ಸ್ವಂತವಾಗದ ಈ ಕುಟುಂಬಗಳ ಪರವಾಗಿ ಭೂ ಒಡೆತನದ ಹಕ್ಕು ಪಡೆದುಕೊಳ್ಳಲು ‘ಅಡ್ವರ್ಸ ಪೊಸೆಷನ್’ ಹಕ್ಕು ಅಡಿ 100 ಪ್ರಕರಣಗಳನ್ನು ನ್ಯಾಯಾಧಿೀಶರ ಮುಂದೆ ದಾಖಲು ಮಾಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.