ADVERTISEMENT

ರೈತರಿಗಾಗಿ ಸಮೃದ್ಧ ಕಿಸಾನ್ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 2:30 IST
Last Updated 19 ಮಾರ್ಚ್ 2012, 2:30 IST

ಹುಬ್ಬಳ್ಳಿ: ಸಮೃದ್ಧ ಕಿಸಾನ್ ಯೋಜನೆ ಯ ಅಡಿಯಲ್ಲಿ ಈಗಾಗಲೇ ರೈತರಿಗೆ 5 ಸಾವಿರ ಎಮ್ಮೆಗಳನ್ನು ಉಚಿತವಾಗಿ ವಿತರಿಸಲಾಗಿದ್ದು, ಈ ವರ್ಷಾಂತ್ಯಕ್ಕೆ ದೇಶದಾದ್ಯಂತ 1 ಲಕ್ಷ ಎಮ್ಮೆಗಳನ್ನು ಉಚಿತವಾಗಿ ವಿತರಿಸಲು ಯೋಜನೆ ರೂಪಿಸಲಾಗಿದೆ~ ಎಂದು ಪುಣೆ ಮೂಲದ ಸಮೃದ್ಧ ಜೀವನ್ ಫುಡ್ಸ್ ಇಂಡಿಯಾ ಲಿಮಿಟೆಡ್‌ನ ಚೇರ್‌ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಹೇಶ ಮೋತೆವಾರ ತಿಳಿಸಿದರು.

ನಗರದ ಗೋಕುಲ್ ಗಾರ್ಡನ್‌ನಲ್ಲಿ ಶನಿವಾರ ಭಾರತೀಯ ಕೃಷಿಕ ಸಮಾಜ ಹಾಗೂ ವಿವಿಧ ಸಂಘಟನೆಗಳ ಸಹ ಯೋಗದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ `ಕಾಯಕಶ್ರೀ~ ಪ್ರಶಸ್ತಿ ಸ್ವೀಕರಿಸಿ ಅವರು ಪತ್ರಕರ್ತರೊಟ್ಟಿಗೆ ಮಾತನಾಡಿದರು. ಈ ಸಮೃದ್ಧ ಕಿಸಾನ್ ಯೋಜನೆಯು ರೈತರನ್ನು ಆರ್ಥಿಕ ಸ್ವಾವಲಂಬಿಯಾಗಿಸುವ ಉದ್ದೇಶ ಹೊಂದಿದೆ.

ಈ ಯೋಜನೆಯ ಅಡಿ ರೈತರಿಗೆ ತರಬೇತಿ ಹಾಗೂ ಎಮ್ಮೆಗಳಿಗೆ ವೈದ್ಯಕೀಯ ಚಿಕಿತ್ಸೆ ಸಹ ನೀಡಲಾಗು ವುದು. ಸರ್ಕಾರಿ ದರದಲ್ಲಿ ರೈತರಿಂದ ಹಾಲನ್ನು ಖರೀದಿಸಲಾಗು ವುದು ಎಂದು ತಿಳಿಸಿದರು.`10 ವರ್ಷಗಳ ಪರಿಶ್ರಮದ ತರುವಾಯ ಕಳೆದ 2011ರ ಡಿಸೆಂಬ ರ್‌ನಲ್ಲಿ ಈ ಯೋಜನೆಯನ್ನು ಮಹಾ ರಾಷ್ಟ್ರದಲ್ಲಿ ಜಾರಿಗೆ ತರಲಾಯಿತು.
ಕೆಲವು ತಿಂಗಳ ಹಿಂದೆ ವಿಜಾಪುರ ಜಿಲ್ಲೆಯ ಝಳಕಿಯಲ್ಲಿ ಇದೇ ತರಹದ ಯೋಜನೆಯನ್ನು ಜಾರಿಗೊಳಿಸಲಾ ಗಿದೆ.
 
ಕರ್ನಾಟಕದಲ್ಲಿ ಭಾರತೀಯ ಕೃಷಿಕ ಸಮಾಜದ ಸಹಯೋಗದಲ್ಲಿ ಈ ಯೋಜನೆ ವಿಸ್ತರಿಸಲಾಗುತ್ತಿದ್ದು, ಬೆಂಗ ಳೂರು, ಬೆಳಗಾವಿ ಹಾಗೂ ಶಿಗ್ಗಾವಿ ಯಲ್ಲಿ ಸ್ಥಳ ಪರಿಶೀಲನೆ ನಡೆದಿದೆ~ ಎಂದು ಅವರು ಹೇಳಿದರು.
ಸಮೃದ್ಧ ಕಿಸಾನ್ ಯೋಜನೆಯು ಈಗಾಗಲೇ ಒರಿಸ್ಸಾ ಹಾಗೂ ಮಧ್ಯ ಪ್ರದೇಶಗಳಲ್ಲಿ ಜಾರಿಯಲ್ಲಿದ್ದು, ರಾಜಸ್ಥಾನದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿದೆ. ಆಸಕ್ತ ರೈತರು ಸಮೃದ್ಧ ಜೀವನ್ ಫುಡ್ಸ್ ಇಂಡಿಯಾ ಲಿ. ಕಚೇರಿಯನ್ನು (020-662 35456) ಸಂಪರ್ಕಿಸಬಹುದು ಎಂದು ಅವರು ನುಡಿದರು.
ಸಂಸ್ಥೆಯ ಮಾರುಕಟ್ಟೆ ಸಂಯೋಜಕ ಮಹೇಶ ಶೇಲಾರ, ಭಾರತೀಯ ಕೃಷಿಕ ಸಮಾಜದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಾಳಜ್ಜ ಗೋದಳ್ಳಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.