ಧಾರವಾಡ: ‘ದೃಢ ನಿರ್ಧಾರ, ನಿಶ್ಚಿತ ಗುರಿ ಮತ್ತು ಪರಿಶ್ರಮದಿಂದ ಸಾಧನೆ ಮಾಡಬಹುದು. ಅಂಗವೈಕಲ್ಯ ಸಾಧನೆಗೆ ಎಂದೂ ಅಡ್ಡಿ ಅಲ್ಲ’ ಎಂದು ಕರ್ನಾಟಕ ವಿಶ್ವವಿದ್ಯಾಲಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಗೀತಾ ನ್ಯಾಮಗೌಡರ್ ಹೇಳಿದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ಅಂಗವಿಕಲರ ‘ಆಸರ’ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಬಹಳಷ್ಟು ಅಂಗವಿಕಲ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಜೀವನದಲ್ಲಿ ಮಹತ್ತರ ಗುರಿಯನ್ನು ಇಟ್ಟುಕೂಂಡು ಸತತ ಪರಿಶ್ರಮದಿಂದ ಗುರಿ ಮುಟ್ಟಲು ಪ್ರಯತ್ನಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ‘ಆತ್ಮ ಸ್ಥೈರ್ಯದೊಂದಿಗೆ ನಿರಂತರ ಪ್ರಯತ್ನದಿಂದ ಸಾಧನೆ ಮುಂದುವರಿಸಿಕೊಂಡು ಹೋಗಬೇಕು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದರು.ಬೆಂಗಳೂರಿನ ’ಹೆಲ್ಪ್ ದಿ ಬ್ಲೈಂಡ್ ಫೌಂಡೇಷನ್’ ನೀಡಿದ ಟೀ ಶರ್ಟ್ಗಳನ್ನು ವಿತರಿಸಲಾಯಿತು.
ಕಾಲೇಜಿನ ಅಂಗವಿಕಲರ ವೇದಿಕೆಯ ಕಾರ್ಯಾಧ್ಯಕ್ಷೆ ಪ್ರೊ. ಕಾಂಚನಾ ಗಾಂವಕರ, ಡಾ. ಎ.ಆರ್. ಯಾರ್ದಿ, ಡಾ. ಬಿ.ಎಫ್. ಚಾಕಲಬ್ಬಿ, ಡಾ.ಐ.ಸಿ. ಮುಳಗುಂದ, ಡಾ. ಕೀರ್ತಿ ಮಿರಜಕರ್, ಡಾ. ಪರ್ವತಲು, ಡಾ. ಮಹೇಶಕುಮಾರ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.