ADVERTISEMENT

ಹುಬ್ಬಳ್ಳಿ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 7:06 IST
Last Updated 1 ಡಿಸೆಂಬರ್ 2021, 7:06 IST

ಹುಬ್ಬಳ್ಳಿ: ಹೊಡೆದಾಡಿಕೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಸಬಾಠಾಣೆ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.

ಇಲ್ಲಿನ ಕೆ.ಕೆ. ನಗರದ ಜಹೀರಬ್ಬಾಸ್‌ ಸೈಯದ್‌ ಬಂಧಿತ. ಜಾಮೀನಿನ ಮೇಲೆ ಹೊರಬಂದು ತಲೆ ಮರೆಯಿಸಿಕೊಂಡಿದ್ದ. ಈತನನ್ನು ಕಸಬಾ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್.ಜೆ ಕುಂಬಾರ ಹಾಗೂ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 2011ರಲ್ಲಿ ಗಲಾಟೆ ನಡೆದಿತ್ತು.

ಮಹಿಳೆ ಮೃತ: ಅದರಗುಂಚಿ ಬಳಿ ಭಾನುವಾರ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ನೂಲ್ವಿ ಗ್ರಾಮದ ಶಿವಬಾಯಿ ಬಾಳಪ್ಪಗೌಡರ (54) ಮೃತಪಟ್ಟಿದ್ದಾರೆ. ಮಗನ ಜೊತೆ ಹೋಗುವಾಗ ಈ ಘಟನೆ ನಡೆದಿತ್ತು. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.