ಹುಬ್ಬಳ್ಳಿ: ‘ಸೊಸೈಟಿಯ ಸರ್ವ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸೊಸೈಟಿಯ ಸರ್ವಾಂಗೀಣ ಪ್ರಗತಿ ಸಾಧ್ಯ’ ಎಂದು ಶಾಸಕ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಸೊಸೈಟಿಯ ಸಭಾಂಗಣದಲ್ಲಿ ಬುಧವಾರ ನಡೆದ ಸೊಸೈಟಿಯ 21ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ಸೊಸೈಟಿ ಆರ್ಥಿಕವಾಗಿ ಮತ್ತಷ್ಟು ಬಲಾಢ್ಯವಾಗಬೇಕಿದೆ. ಪ್ರತಿಯೊಬ್ಬರೂ ಷೇರು ಸಂಗ್ರಹಕ್ಕೆ ಆದ್ಯತೆ ಕೊಡಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು.
ಸೊಸೈಟಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿ ಸದಸ್ಯರಿಗೆ ಭರವಸೆ ನೀಡಿದ ಅಬ್ಬಯ್ಯ, ಸೊಸೈಟಿ ಉನ್ನತಿಗಾಗಿ ಹಾಗೂ ಕಟಬಾರೆ ಸದಸ್ಯರಿಂದ ಕಾಲಮಿತಿಯೊಳಗೆ ಸಾಲ ವಸೂಲಾತಿ ಮಾಡುತ್ತಿರುವ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು.
ಇಂದುಮತಿ ಶಿರಗಾವಿ ನಿರೂಪಿಸಿದರು. ಬಾಲಕೃಷ್ಣ ಗಾಣದಾಳ ಸ್ವಾಗತಿಸಿದರು. ಕೆ.ಎ. ಮುರಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೊಸೈಟಿಯ ಸಿ.ಇ.ಒ ಬಸವರಾಜ ಜಿ. ಬಸಲಿಂಗೋಳ ವಾರ್ಷಿಕ ವರದಿ ಮಂಡಿಸಿದರು. ಶರಣಪ್ಪ ಹೊಸಮನಿ ವಂದಿಸಿದರು.
ನಿರ್ದೇಶಕರಾದ ಎ.ಬಿ. ಹೊಸಮನಿ, ಎಸ್.ಬಿ. ಚಿಕ್ಕೋಪ, ಎಸ್.ಸಿ. ಸಿಂಧಗಿ, ಆರ್.ಬಿ. ಗಡ್ಡದ, ಡಾ. ಸುಭಾಶ್ಚಂದ್ರ ನಾಟೀಕರ, ಎಸ್.ಎಚ್. ಬೂದಪ್ಪನವರ, ಟಿ.ಟಿ. ದೊಡ್ಡಮನಿ, ಸದಸ್ಯರಾದ ರಮೇಶ ನಾಗಣ್ಣವರ, ಹುಲಗೆಪ್ಪ ಚಲವಾದಿ, ಗಿರಿಜಾ ಬಿ. ಬಸಲಿಂಗೋಳ, ಸಿ.ಎಸ್. ಕಾಂಬಳೆ, ಗಣೇಶ ದೊಡ್ಡಮನಿ, ಬಿ.ವೈ. ನಂದಿಬಿಸ್ಟನ್ನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.