ಹುಬ್ಬಳ್ಳಿ: ದೇಶಪಾಂಡೆ ಪ್ರತಿಷ್ಠಾನ ಮತ್ತು ಜೆ.ಎಸ್. ಡಬ್ಲ್ಯೂ ಫೌಂಡೇಷನ್ ಸಹಯೋಗದಲ್ಲಿ ಸಣ್ಣ ಉದ್ಯಮಿಗಳ ಅಭಿವೃದ್ಧಿ ಕಾರ್ಯಕ್ರಮದಡಿ ಅ. 13ರಂದು ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದ ಆವರಣದಲ್ಲಿ ಐದು ದಿನಗಳ 'ಉದ್ಯಮಿ ಮೆಗಾ ಸಂತೆ'ಯನ್ನು ಆಯೋಜಿಸಲಾಗಿದೆ ಎಂದು ಎಂದು ಪ್ರತಿಷ್ಠಾನದ ಹಿರಿಯ ವ್ಯವಸ್ಥಾಪಕಿ ಸುರೇಖಾ ಮಿರಜಕರ ಹೇಳಿದರು.
ಶಾಸಕ ಜಗದೀಶ ಶೆಟ್ಟರ್ ಅವರು ಅ.14ರಂದು ಸಂಜೆ 4ಕ್ಕೆ ಸಂತೆಯನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಜೆಎಸ್ ಡಬ್ಲ್ಯೂ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಪುರೋಹಿತ್, ಪ್ರತಿಷ್ಠಾನದ ಸಿಇಒ ವಿವೇಕ ಪವಾರ ಹಾಗೂ ಮಯೂರ ಕಾಂಬಳೆ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಷ್ಠಾನದ ಮಾರುಕಟ್ಟೆ ಸಹಾಯಕಿ ಮಂಜುಳಾ ಕರಡಿ ಮಾತನಾಡಿ, ಸುಮಾರು 80 ಮಳಿಗೆಗಳು ಇರಲಿವೆ. ಪ್ರತಿ ಮಳಿಗೆಗೆ ₹3 ಸಾವಿರ ಬಾಡಿಗೆ ದರ ನಿಗದಿಪಡಿಸಲಾಗಿದೆ. ವಾರಾಣಸಿ ಹಾಗೂ ರಾಜ್ಯದ ವಿವಿಧ ಭಾಗದ ಉದ್ಯಮಿಗಳು ಮಳಿಗೆ ಹಾಕಲಿದ್ದಾರೆ ಎಂದರು.
ಪ್ರತಿಷ್ಠಾನದ ರವಿಕುಮಾರ್ ಮತ್ತು ಸುನಂದಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.