ಹುಬ್ಬಳ್ಳಿ: ನಗರದಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವಿದ್ಯಾನಗರ, ಗಿರಣಿಚಾಳ, ಮೂರುಸಾವಿರ ಮಠ, ವಿಕ್ಟೋರಿಯಾ ರಸ್ತೆ ಸೇರಿದಂತೆ ಕೆಲವೆಡೆ ತೊಂದರೆಯಾಯಿತು. ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮಳೆಯಲ್ಲಿ ನೆನೆದುಕೊಂಡೇ ಹೋಗುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.
ಕೆಲ ದಿನಗಳಿಂದ ಬಿತ್ತನೆಯಾದರೂ ಸುರಿಯದ ಮಳೆಯಿಂದಾಗಿ ಚಿಂತೆಗೀಡಾಗಿದ್ದ ರೈತರು, ಇಂದು ಸುರಿದ ಮಳೆಯಿಂದಾಗಿ ಸಂತಸಗೊಂಡರು. ಜೊತೆಗೆ, ಹೊಲಗಳಲ್ಲಿ ಬಿತ್ತನೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳು ಬಿರುಸುಗೊಂಡವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.