ಧಾರವಾಡ: 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ನಿವೃತ್ತ ಗ್ರಂಥಪಾಲಕ ಎಸ್.ಆರ್ ಗುಂಜಾಳ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಆಹ್ವಾನ ನೀಡಿದರು.
‘ಸಮ್ಮೇಳನವನ್ನು ಫೆ.3 ಮತ್ತು 4 ರಂದು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ವಿಜಯಲಕ್ಷ್ಮೀ ಬಾಳೆಕುಂದ್ರಿ, ಬಾಳಣ್ಣ ಶೀಗಿಹಳ್ಳಿ ಮಾತನಾಡಿದರು. ಶಂಕರ ಹಲಗತ್ತಿ, ಶಂಕರ ಕುಂಬಿ, ಜಿನದತ್ತ ಹಡಗಲಿ, ಎಸ್.ಎಸ್.ದೊಡಮನಿ, ಶಾಂತವೀರ ಬೆಟಗೇರಿ, ಎಸ್.ಎಚ್.ಪ್ರತಾಪ್, ಮಹಾಂತೇಶ ನರೇಗಲ್, ಮಾತಾಂಡಪ್ಪಾ ಕತ್ತಿ , ವೀರಣ್ಣ ವಡ್ಡೀನ, ಪ್ರೇಮಾ ನಡುವಿನಮನಿ, ಮಧುಮತಿ ಸಣಕಲ್, ಚಂದ್ರಶೇಖರ ಮಟ್ಟಿ, ವೀರೇಶ ಜಾಲಿಕಟ್ಟಿ, ನವೀನ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.