ಹುಬ್ಬಳ್ಳಿ: ಗೋಕುಲ ರಸ್ತೆಯ ಶ್ರೇಯಾ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಲಿಂಗರಾಜ ಧಾರವಾಡಶೆಟ್ಟರ್ ಮರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ನಿವಾಸಿಗಳ ಸಭೆಯಲ್ಲಿ ಲಿಂಗರಾಜ ಅವರನ್ನು 2025ರವರೆಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಗಳಾಗಿ ಮುಕುಂದ ರಾಯಭಾಗಿ, ಡಿ.ಜಿ. ಕುಲಕರ್ಣಿ, ಕಾರ್ಯದರ್ಶಿಯಾಗಿ ಸುಚಿತ್ರಾ ಭಾವಿ, ಕೋಶಾಧಿಕಾರಿಯಾಗಿ ರಮೇಶ ರಂಗ್ರೇಜ್, ಎಸ್.ಎಸ್. ಜಾಧವ, ಉಪಾದ್ಯಕ್ಷರಾಗಿ ಜಿ.ವೈ. ಕೆಂಭಾವಿ, ವಿ.ಎಸ್. ಕುಲಕರ್ಣಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಭಿಜಿತ್ ಮಾಂಡವಕರ, ಅಶೋಕ ಬೀಳಗಿ, ಸಾಗರ ದಲಬಂಜನ್, ವಿಜಯಕುಮಾರ ಮಠದ, ತುಷಾರ ಉಚಗಾಂವಕರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.