ADVERTISEMENT

ಹುಬ್ಬಳ್ಳಿ: ನವಜೀವನ ಸೇವಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:31 IST
Last Updated 10 ಆಗಸ್ಟ್ 2022, 4:31 IST
ಹುಬ್ಬಳ್ಳಿಯ ಗಿರಣಿಚಾಳದ ನವಜೀವನ ಹರಿಜನ ಸೇವಾ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಹುಬ್ಬಳ್ಳಿಯ ಗಿರಣಿಚಾಳದ ನವಜೀವನ ಹರಿಜನ ಸೇವಾ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು   

ಹುಬ್ಬಳ್ಳಿ: ನಗರದ ಗಿರಣಿಚಾಳದಲ್ಲಿರುವ ನವಜೀವನ ಹರಿಜನ ಸೇವಾ ಸಂಘದ ಅಧ್ಯಕ್ಷರಾಗಿ ಸಾಗರ ಎಂ. ಹಿರೇಮನಿ ಆಯ್ಕೆಯಾಗಿದ್ದಾರೆ.

‍ಉಪಾಧ್ಯಕ್ಷರಾಗಿ ಲೋಕೇಶ ಬೊಮ್ಮನಾಳ, ಶ್ರೀಕಾಂತ ತಿಳಿಗಾಳ, ಹುಸೇನಪ್ಪ ಸಿಂದನೂರ, ಸಿದ್ದಪ್ಪ ದೊಡ್ಡನಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ನವೀನ ಹಾಲಹರವಿ, ಕಾರ್ಯದರ್ಶಿಯಾಗಿ ಅಜಯ ಬೂದಿಹಾಳ, ಸಂಘಟನಾ ಕಾರ್ಯದರ್ಶಿಯಾಗಿ ಸುಧಾಕರ ಪೂಜಾರ, ಖಜಾಂಚಿಯಾಗಿ ರಾಜೇಶ ಅಚ್ಚಳ್ಳಿ, ಸಹ ಖಜಾಂಚಿಗಳಾಗಿ ಸಂತೋಷ ಜುಮಲಾಪುರ, ಗೋಪಾಲ ಸಿದ್ರಾಮಪುರ, ಆಡಳಿತ ಮಂಡಳಿ ಸದಸ್ಯರಾಗಿ ರವಿಕುಮಾರ ದೊಡ್ಡಮನಿ, ಕಾಂತರಾಜ ನಡಗಡ್ಡಿ, ವೀರೇಶ ಮದರಿ, ಸಂತೋಷ ಹಿರೇಮನಿ, ಷಣ್ಮುಖ ಡಂಬಲದಿನ್ನಿ, ರವಿರಾಜ ಲಾದುಂಚಿ, ಭರತ ಹಾಲಹರವಿ, ಸಾಹುಲ ಪೂಜಾರ, ಮಂಜುನಾಥ ತಿಳಿಗಾಳ, ಮಂಜುನಾಥ ತಲೇಖಾನ, ನಾಗರಾಜ ಜುಮಲಾಪುರ, ನವೀನ ಲಾದುಂಚಿ, ಗಣೇಶ ಜುಮಲಾಪುರ ಹಾಗೂ ಪ್ರಜ್ವಲ ಕಮಲಾಪುರ ಅವರು ಆಯ್ಕೆಯಾಗಿದ್ದಾರೆ.

ಸಂಘದ ಹಿಂದಿನ ಅಧ್ಯಕ್ಷ ಮೋಹನ ಹಿರೇಮನಿ ಅಧ್ಯಕ್ಷತೆಯಲ್ಲಿ ಹೊಸೂರಿನ ಆರ್‌.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಪರಶುರಾಮ ಪೂಜಾರ, ಹನಮಂತಪ್ಪ ಮಾಲಪಲ್ಲಿ, ರಾಕೇಶ ಅಚ್ಚಳ್ಳಿ, ಚಿದಾನಂದ ವಡ್ಡರಕಲ್ಲು, ಗುರುನಾಥ ಅತ್ತಿಗಡ್ಡು ಹಾಗೂ ಸಂಘದ ಸದಸ್ಯರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.