ADVERTISEMENT

ಶಂಕರಾಚಾರ್ಯ ಜಯಂತಿ 8ಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:04 IST
Last Updated 6 ಮೇ 2022, 16:04 IST

ಹುಬ್ಬಳ್ಳಿ: ನಗರದ ಕೇಶ್ವಾಪುರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಿಂದ ಮೇ 8ರಂದು ಶಂಕರಾಚಾರ್ಯ ಜಯಂತಿ ಹಮ್ಮಿಕೊಳ್ಳಲಾಗಿದೆ. ಸಂಜೆ 4.30ಕ್ಕೆ ಪಾರಸವಾಡಿ ಕಾಶಿ ವಿಶ್ವನಾಥ ದೇವಾಲಯದಿಂದ ಸಂಘದ ಕಟ್ಟಡದವರೆಗೆ ಶಂಕರಾಚಾರ್ಯರ ಚಿತ್ರದ ಮೆರವಣಿಗೆ ಆಯೋಜಿಸಲಾಗಿದೆ.

ನಂತರ ಸಂಘದ ಸಭಾಭವನದಲ್ಲಿ ಧಾರವಾಡದ ಡಾ. ಮಹೇಶ ಹಂಪಿಹೊಳಿ ಅವರಿಂದ ಪ್ರವಚನ ಜರುಗಲಿದೆ. ಜಯಂತಿ ಅಂಗವಾಗಿ ಆರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷಸುನೀಲ ಗುಮಾಸ್ತೆ ತಿಳಿಸಿದ್ದಾರೆ.

ನೀಲಕಂಠೇಶ್ವರ ಜಯಂತಿ ಮೇ 8ಕ್ಕೆ

ADVERTISEMENT

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಕುರುಹಿನಶೆಟ್ಟಿ ಹಿತಾಭಿವೃದ್ಧಿ ಸಂಘ, ನೀಲಕಂಠೇಶ್ವರ ಪತ್ತಿನ ಸಹಕಾರಿ ಸೌಹಾರ್ದ ನಿಯಮಿತ ಸಹಯೋಗದಲ್ಲಿ ಮೇ ಕರಂದು ನೇಕಾರ ನಗರದ ವಾಣಿ ಪ್ಲಾಟ್‌ನಲ್ಲಿ ನೀಲಕಂಠೇಶ್ವರ ಸ್ವಾಮಿಯ 15ನೇ ವರ್ಷದ ಜಯಂತಿ, ಕುರುಹಿನ ಕುರುಹು ಕೈಪಿಡಿ ಬಿಡುಗಡೆ ಹಾಗೂ ಆಂಜನೇಯ ಮೂರ್ತಿ ಮರು ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 8ಕ್ಕೆ ಅಭಿಷೇಕ, 9ಕ್ಕೆ ನೀಲಕಂಠೇಶ್ವರ ಸ್ವಾಮಿ ಭಾವಚಿತ್ರ ಹಾಗೂ ಆಂಜನೇಯ ಮೂರ್ತಿ ಮೆರವಣಿಗೆ, 10.30ಕ್ಕೆ ಮೂರ್ತಿ ಪ್ರತಿಷ್ಠಾಪನೆ ಹಾಗೂ 11ಕ್ಕೆ ಧರ್ಮಸಭೆ ನಡೆಯಲಿದೆ. ಬೆಟಗೇರಿ–ಗದಗ ನೀಲಕಂಠ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ. ಹನುಮಂತಪ್ಪ ಧೂಪದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.