ಹುಬ್ಬಳ್ಳಿ: ನಗರದ ರೈಲು ನಿಲ್ದಾಣದಿಂದ ಬನಾರಸ್ ನಡುವೆ ಪ್ರತಿ ವಾರ ಸಂಚರಿಸುವ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಆಗಸ್ಟ್ 5 ಹಾಗೂ 7ರಂದು ಎರಡೂ ಮಾರ್ಗದಲ್ಲಿ ರದ್ದು ಮಾಡಲಾಗಿದೆ ಎಂದುನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಗದಗ –ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಎಕ್ಸ್ಪ್ರೆಸ್ ರೈಲು ಆ. 4ರಿಂದ 9ರವರೆಗೆ,ಮೈಸೂರು–ವಾರಣಾಸಿ ಎಕ್ಸ್ಪ್ರೆಸ್ 4, 6, 9 ಮತ್ತು 11ರಂದು, ಯಶವಂತಪುರ–ಬಿಕಾನೇರ್ ಎಕ್ಸ್ಪ್ರೆಸ್ 5,7,9ರಂದು, ಬರ್ಮರ್–ಯಶವಂತ್ ಎಕ್ಸ್ಪ್ರೆಸ್ 4, 8ರಂದು, ಯಶವಂತಪುರ–ಜೈಪುರ ಎಕ್ಸ್ಪ್ರೆಸ್ 4, 6ರಂದು, ಕೊಯಮತ್ತೂರು–ರಾಜಕೋಟ್ ಎಕ್ಸ್ಪ್ರೆಸ್ 5, 7ರಂದು ಹಾಗೂ ಸಾಯಿನಗರ ಶಿರಡಿ–ಮೈಸೂರು ಎಕ್ಸ್ಪ್ರೆಸ್ 9ರಂದು ರದ್ದಾಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.