ADVERTISEMENT

ಜಾತ್ರೆ ಅಂಗವಾಗಿ 6ರಿಂದ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 14:02 IST
Last Updated 3 ಮಾರ್ಚ್ 2021, 14:02 IST

ಹುಬ್ಬಳ್ಳಿ: ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಮಾ. 6ರಿಂದ ಮೂರು ದಿನ ಹೊಸಪೇಟೆ–ದಾವಣಗೆರೆ ಎರಡೂ ಮಾರ್ಗಗಳಿಂದ ವಿಶೇಷ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

6ರಂದು ಬೆಳಿಗ್ಗೆ 8.15ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು 11.55ಕ್ಕೆ ದಾವಣಗೆರೆ ತಲುಪಲಿದೆ. ದಾವಣಗೆರೆಯಿಂದ ಮಧ್ಯಾಹ್ನ 12.15ಕ್ಕೆ ಹೊರಟು ಮ. 3.55ಕ್ಕೆ ಹೊಸಪೇಟೆ ಮುಟ್ಟಲಿದೆ. ಈ ಪ್ರಯಾಣಕ್ಕೆ ಸಾಮಾನ್ಯ ದರ ಇರಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸದೆ ರೈಲು ನಿಲ್ದಾಣದಲ್ಲಿಯೂ ಟಿಕೆಟ್ ಪಡೆದು ಪ್ರಯಾಣಿಸಬಹುದು.

ಈ ರೈಲು ತುಂಗಭದ್ರಾ ಡ್ಯಾಂ, ವ್ಯಾಸನಕೆರಿ, ವ್ಯಾಸ ಕಾಲೊನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿ ಬೊಮ್ಮನಹಳ್ಳಿ, ಮಳವಿ, ಕೊಟ್ಟೂರು, ಬೆಣ್ಣೆಹಳ್ಳಿ, ಹರಪನಹಳ್ಳಿ, ತೆಲಗಿ ಮತ್ತು ಅಮರಾವತಿ ಕಾಲೊನಿ ಮಾರ್ಗದಲ್ಲಿ ಸಂಚರಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.