ADVERTISEMENT

ಎನ್‌ಕೌಂಟರ್‌ ತಪ್ಪು ಅಲ್ಲ; ವಿಚಾರಣೆ ಅವಶ್ಯ: ಶಾಮ್‌ ಭಟ್‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 16:24 IST
Last Updated 28 ಏಪ್ರಿಲ್ 2025, 16:24 IST
ಶ್ಯಾಮ್‌ ಭಟ್‌
ಶ್ಯಾಮ್‌ ಭಟ್‌   

ಹುಬ್ಬಳ್ಳಿ: ‘ಐದು ವರ್ಷದ ಬಾಲಕಿ ಕೊಲೆ ಆರೋಪಿ ರಿತೇಶಕುಮಾರ್‌ಗೆ ಗುಂಡು ಹೊಡೆದಿದ್ದು ತಪ್ಪು, ಸರಿ ಎಂದು ಹೇಳುತ್ತಿಲ್ಲ. ಆದರೆ, ಆಯೋಗದ ನಿಯಮಾವಳಿ ಪ್ರಕಾರ ವಿಚಾರಣೆಗೆ ಬಂದಿದ್ದೇವೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶಾಮ್‌ ಭಟ್‌ ಹೇಳಿದರು.

‘ಎಲ್ಲ ವ್ಯಕ್ತಿಗೂ ಜೀವಿಸುವ ಹಕ್ಕು ಇದೆ. ಅದನ್ನು ಯಾರೂ ಕಸಿದುಕೊಳ್ಳಬಾರದು. ಹುಬ್ಬಳ್ಳಿಯ ಪೊಲೀಸರು ಆರೋಪಿಯ ಬದುಕುವ ಹಕ್ಕನ್ನು ಕಿತ್ತುಕೊಂಡಿರುವುದು ಮಾನವ ಹಕ್ಕು ಉಲ್ಲಂಘನೆಯಾಗಿದೆ. ಈ  ಹಿನ್ನೆಲೆಯಲ್ಲಿ ಆಯೋಗದಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಗುಂಡು ಹಾರಿಸುವ ಅಗತ್ಯವಿತ್ತೆ ಎಂಬುದು ಸೇರಿ ಹಲವು ವಿಷಯಗಳ ಬಗ್ಗೆ ತನಿಖೆ ನಡೆಯಲಿದೆ. ಗುಂಡು ಹಾರಿಸಿದ ಪಿಎಸ್‌ಐ ಅನ್ನಪೂರ್ಣ ವಿಶ್ರಾಂತಿಯಲ್ಲಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಡಿವೈಎಸ್‌ಪಿ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ಎರಡು ತಿಂಗಳಲ್ಲಿ ಆಯೋಗಕ್ಕೆ ವರದಿ ನೀಡಲಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.