ADVERTISEMENT

ಜೋರಾಗಿದೆ ಶ್ಯಾವಿಗೆ ತಯ್ಯಾರಿ...

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 7:20 IST
Last Updated 22 ಮಾರ್ಚ್ 2014, 7:20 IST

ರೋಣ: ಹಳ್ಳಿಗಳಲ್ಲಿ ಶ್ಯಾವಿಗೆ ಸಂಡಗಿ ತಾರಿಸುವ ಕಾರ್ಯ ಬಲು ಜೋರು. ಅಬ್ಬಾ! ಇದೆಂಥ ಬಿಸಿಲು ಸಾಕು ಸಾಕಾಗಿ ಹೋಗುತ್ತದೆ ಬಿಸಿಲಿಗೆ ಹಲವರು ಬಳಲಿದರೆ ಅದೇ ಬಿಸಿಲನ್ನು ಗ್ರಾಮೀಣ ಭಾಗದಲ್ಲಿ ಮಹಿಳೆಯರು ಆಹಾರ ಪದಾಥರ್ ತಯಾರಿಸಿ ಕೊಳ್ಳಲು ಉತ್ತಮ ಕಾಲವಾಗಿದೆ ಬೇಸಿಗೆ ಕಾಲದ ಬಿಸಿಲಿಗೆ ಶ್ಯಾವಿಗೆ ಹಾಗೂ ಇತರ ಆಹಾರ ಪಧಾರ್ಥಗಳನ್ನು ತಯಾರಿಸು ವುದು ಬಹುತೇಕ ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.

ಬೆಸಿಗೆಯಲ್ಲು ಮಾಡುವ ವಿಶೇಷತೆ: ಬೇಸಿಗೆಯಲ್ಲಿ ಮಾಡುವ ಮುಖ್ಯ ಉದ್ದೇಶವೆಂದರೆ ಈಗ ಬೀಳುವ ಬಿಸಿಲಿಗೆ ಆಹಾರ ಪದಾರ್ಥಗಳನ್ನು ತಯಾರಿಸಿ ಒಣಗಿಸಿ ಶೇಖರಿಸಿ ಡಬ್ಬಿಗಳಲ್ಲಿ ಇಡುವು ದರಿಂದ ಮುಂದಿನ ವರ್ಷದವರೆಗೂ ಕೆಡದಂತೆ, ವಾಸನೆ ಬರದಂತೆ ಕಾಪಾಡ ಬಹುದು ಎಂಬುದು ಗ್ರಾಮೀಣ ಜನರ ಅಭಿಪ್ರಾಯ ಹೊಲಗಳಲ್ಲಿಯ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡ ಮಹಿಳೆಯರು ಈ ದಿನಗಳಲ್ಲಿ ಶ್ಯಾವಿಗೆ, ಸಂಡಗಿ,ಸವತಿ ಬೀಜ, ಗೌಲಿ, ಹಪ್ಪಳ ಮುಂತಾದ ಪದಾರ್ಥಗಳನ್ನು ತಯಾರಿಸಿ ಸೂಕ್ತ ವ್ಯವಸ್ಥೆಯೊಂದಿಗೆ ಶೇಖರಿಸಿ ಇಟ್ಟುಕೊಳ್ಳ ವುದು ಮನೆಗಳಲ್ಲಿ ಕಂಡುಬರುತ್ತದೆ.

ಓಣಿಯಲ್ಲಿ ನಾಲ್ವಾರು ಕುಟುಂಬದ ಮಹಿಳೆಯರು ಸೇರಿಕೊಂಡು ನಿತ್ಯ ಒಬ್ಬೂಬ್ಬರ ಮನೆಯ ಶ್ಯಾವಿಗೆಯನ್ನು (ಹೊಸೆಯುವುದು) ತಯಾರಿಸುವುದು ಒಬ್ಬರದು ಮುಗಿದ ನಂತರ ಮೊತ್ತೊಬ್ಬರದು ಹೀಗೆ ಇಲ್ಲರೂ ತಮ್ಮಗೆ  ಬೇಕಾಗುವಷ್ಟು ಶ್ಯಾವಿಗೆಯನ್ನು ತಯಾರಿ ಸಿಕೊಳ್ಳುವರು ಮತ್ತು ಪಟ್ಟಣಗಳಲ್ಲಿ ವಾಸಿಸುವ  ತಮ್ಮ ಹತ್ತಿರದ ಸಂಬಂಧಿ ಗಳಿಗೆ ಕೊಡ ಕೊಟ್ಟು ಕಳುಹಿಸುವುದು ಗ್ರಾಮೀಣ ಭಾಗಗಳಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ಉಪಯೋಗಕ್ಕೆ ಬೇಕಾಗುವಷ್ಟು ತೆಗೆದುಕೊಂಡು ಊಟ ಮಾಡಲು ಕುಟುಂಬದ ಸದಸ್ಯರಿಗೆ ಅಹ್ವಾನಿತರಿಗೆ ಉಣಬಡಿಸುವುದು.

ಹೀಗಿದೆ ತಯಾರಿ: ಗೋಧಿಯನ್ನು ಸ್ವಚ್ಛವಾಗಿ ತೊಳೆದು ನೆರಳಿನಲ್ಲಿ ಚೆನ್ನಾಗಿ ಒಣಗಿಸಿಕೊಂಡು ಹಿಟ್ಟಿನ ಗಿರಣೆಯಲ್ಲಿ ಬಿಸಿಸಿ ಮನೆಗೆ ತಂದು ಬುಟ್ಟಿಗೆ ಬಟ್ಟೆ ಕಟ್ಟಿಸೋಸಿ ರವೆ ಹಾಗೂ ಹಿಟ್ಟನ್ನು ಬೇರ್ಪಡಿಸಿ ಹಿಟ್ಟು ಕೊಡಿಸಿಕೊಂಡು ಕಲಿಸಿ ಮೂರು ಗಂಟೆ ನಂತರ ಹಿಟ್ಟನ್ನು ಮಿದಿದ್ದರೆ ಉತ್ತಮ ಶ್ಯಾವಿಗೆಗಳು ಬರುತ್ತೇವೆ. ಎಂದು ಹೇಳುತ್ತಾರೆ ಪಟ್ಟಣದ ಶಿವಪೇಟೆಯ ನಿವಾಸಿ ಮುತ್ತವ್ವ ಸಂಗನಾಳ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.